ಭೂ ವಿವಾದ: ತಮ್ಮನಿಂದಲೇ ಕೊಲೆಯಾದ ಅಣ್ಣ

Update: 2020-06-20 17:29 GMT

ಮೈಸೂರು,ಜೂ.20: ಭೂಮಿಗೆ ಸಂಬಂಧಿಸಿದ ವಿವಾದ ಭುಗಿಲೆದ್ದ ಕಾರಣ ಅಣ್ಣ ತಮ್ಮರ ನಡುವೆ ವೈಷಮ್ಯ ತಾರಕಕ್ಕೇರಿ ತಮ್ಮನಿಂದಲೇ ಅಣ್ಣ ಕೊಲೆಯಾದ ಘಟನೆ ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.

ಮಹದೇವೇಗೌಡ (53) ತಮ್ಮನಿಂದ ಕೊಲೆಯಾದ ವ್ಯಕ್ತಿ. ತಮ್ಮ ಗಂಗಾಧರ್, ಅಣ್ಣ ಮಹದೇವೇಗೌಡ ಮೇಲೆ ಕುಡುಗೋಲುನಿಂದ ಹಲ್ಲೆ ಮಾಡಿ ಎದೆ ಭಾಗಕ್ಕೆ ಇರಿದು ಕೊಲೆಗೈದಿದ್ದಾನೆ ಎನ್ನಲಾಗಿದೆ.

ಮೃತ ಮಹದೇವೇಗೌಡರ ಹೆಸರಿನಲ್ಲಿದ್ದ ಆರು ಎಕರೆ ಜಮೀನು ಉಳುಮೆ ಮಾಡುವ ವಿಚಾರದಲ್ಲಿ ಗಲಾಟೆ ಆರಂಭವಾಗಿದ್ದು ಜಮೀನಿನಲ್ಲಿ ಮಾತಿಗೆ ಮಾತು ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಘರ್ಷಣೆಯಲ್ಲಿ ಆರೋಪಿ ಗಂಗಾಧರನಿಗೂ ಗಾಯವಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನಂತರ ಗಂಗಾಧರನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಸ್ಥಳಕ್ಕೆ ಎಚ್.ಡಿ.ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News