ಕುಡಿದ ಅಮಲಿನ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

Update: 2020-06-20 17:52 GMT

ಹಾಸನ, ಜೂ.20: ನಗರದ ರೈಲ್ವೆ ನಿಲ್ದಾಣದ ಬಳಿ ಕಂಠ ಪೂರ್ತಿ ಕುಡಿದು ಪರಸ್ಪರ ಜಗಳವಾಗಿ ಕೊನೆಯಲ್ಲಿ ವ್ಯಕ್ತಿ ಓರ್ವನ ಕೊಲೆಯಾಗುವ ಮೂಲಕ ಜಗಳ ಅಂತ್ಯವಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ನಗರದ ಬಿ.ಎಂ. ರಸ್ತೆ ಬಳಿ ಶ್ರಿ ಮಾರುತಿ ದೇವಾಲಯ ಮುಂಬಾಗ ಇರುವ ಬಸ್ ನಿಲ್ದಾಣದಲ್ಲಿ ರಾತ್ರಿ ಸಮಯ ಕುಡಿದ ಅಮಲಿನಲ್ಲಿ ಬಂದ ಕೆಲವರು ಮಾತಿನ ಚಕಮಕಿ ನಡೆಸಿದ್ದು, ನಂತರ ಕಬ್ಬಿಣ ರಾಡೊಂದರಿಂದ ವ್ಯಕ್ತಿ ಓರ್ವನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News