ಕೊಳ್ಳೇಗಾಲ: ಅಕ್ರಮವಾಗಿ ಪಡಿತರ‌ ಅಕ್ಕಿ ಸಾಗಾಟ; ಇಬ್ಬರು ಪೊಲೀಸ್ ವಶಕ್ಕೆ

Update: 2020-06-30 18:22 GMT

ಕೊಳ್ಳೇಗಾಲ,ಜೂ.30: ಅಕ್ರಮವಾಗಿ  ಪಡಿತರ‌ ಅಕ್ಕಿಯನ್ನು ಸಾಗಾಣೆ ಮಾಡುತ್ತಿದ್ದ ಇಬ್ಬರನ್ನು ಗೂಡ್ಸ್ ಆಟೋ ಸಮೇತ ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಟಗರಪುರ ಗ್ರಾಮದ ಶಿವಣ್ಣ (49)ಹಾಗೂ ಚಾಲಕ ಪಾಪಣ್ಣ (39)ಬಂಧಿತ ಆರೋಪಿ. ಸುಮಾರು 626 ಕೆ.ಜಿ ತೂಕದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಇವರು ತಾಲ್ಲೂಕಿನ ಕುಂತೂರು ಸುತ್ತಮುತ್ತಲು ಗ್ರಾಮಗಳಲ್ಲಿ ಹೆಚ್ಚಿನ ಬೆಲೆಗೆ ಜನರಿಂದ ಪಡಿತರವನ್ನು ಖರೀದಿ ಮಾಡಿ ಟಿ.ನರಸೀಪುರಕ್ಕೆ ಮಾರಾಟ ಮಾಡಲು ಸಾಗಿಸುತ್ತಿರುವಾಗ ಕುಂತೂರು ಮಠದಿಂದ ಸಕ್ಕರೆ ಕಾರ್ಖಾನೆಯ ಅಡ್ಡರಸ್ತೆಯಲ್ಲಿ ಸಾಗಿಸುತ್ತಿರುವಾಗ ಪೊಲೀಸ್ ವೃತ್ತ ನೀರಿಕ್ಷಕ ಶ್ರೀಕಾಂತ್ ರವರ ನೇತೃತ್ವದಲ್ಲಿ ಗ್ರಾಮಾಂತರ ಠಾಣೆಯ ಎಸ್.ಐ ಅಶೋಕ್ ತಮ್ಮ ತಂಡದೊಂದಿಗೆ ತೆರಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು.

ಬಂಧಿತ ಆರೋಪಿಗಳಿಂದ 12 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಸುಮಾರು 626 ಕೆ.ಜಿ ತೂಕದ ಪಡಿತರ ಅಕ್ಕಿ ಹಾಗೂ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡರು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯದ‌ ಮುಂದೆ ಹಾಜರುಪಡಿಸಿದರು.

ದಾಳಿಯಲ್ಲಿ ಆಹಾರ ನೀರಿಕ್ಷಕ ಬಿಸಲಾಯ್ಯ, ಪೊಲೀಸ್ ಪೇದೆಗಳಾದ ವೀರೇಂದ್ರ, ಮಹೇಂದ್ರ ಚಾಲಕ ನಾರಾಯಣ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News