ಕೊರೋನ ನಡುವೆ ಪಾದಪೂಜೆ: ಝಮೀರ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಲು ಚಿಂತನೆ

Update: 2020-07-01 19:00 GMT

ಬೆಂಗಳೂರು, ಜು.1: ಕೋವಿಡ್-19 ಸೋಂಕಿನ ಭೀತಿ ನಡುವೆಯೂ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಅವರು ಪಾದಪೂಜೆ ಮಾಡಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಇತ್ತೀಚಿಗೆ ಇಲ್ಲಿನ ಕೆಂಪೇಗೌಡ ನಗರದಲ್ಲಿ ನಡೆದ ಕಾರ್ಯಕ್ರಮಯೊಂದಲ್ಲಿ ಪಾಲ್ಗೊಂಡ ಝಮೀರ್ ಅಹ್ಮದ್ ಅವರನ್ನು ಕೆಲ ವ್ಯಕ್ತಿಗಳು ಸನ್ಮಾನಿಸಿ, ಪಾದಪೂಜೆ ಮಾಡಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅಷ್ಟೇ ಅಲ್ಲದೆ, ಕೊರೋನ ಭೀತಿ ನಡುವೆ ಸುರಕ್ಷಿತ ಅಂತರ ಕಾಪಾಡಿಕೊಳ್ಳದಿರುವುದಕ್ಕೆ ಹಲವು ಟೀಕಿಸಿದ್ದರು.

ಈ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಕೆಂಪೇಗೌಡ ನಗರ ಠಾಣಾ ಪೊಲೀಸರು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News