ಸಂತ್ರಸ್ತೆ ಹೇಳಿಕೆ ಬಗ್ಗೆ ಬಳಸಿದ್ದ ವಿವಾದಾತ್ಮಕ ಪದ ಕೈಬಿಟ್ಟ ಹೈಕೋರ್ಟ್

Update: 2020-07-02 15:05 GMT

ಬೆಂಗಳೂರು, ಜು.2: ಅತ್ಯಾಚಾರವಾದ ಬಳಿಕ ಯುವತಿಯು ಪೊಲೀಸರಿಗೆ ದೂರು ನೀಡುವಲ್ಲಿ ಏಳು ದಿನಗಳ ವಿಳಂಬವಾಗಿದೆ ಎಂಬ ಸಂತ್ರಸ್ತೆ ಹೇಳಿಕೆ ಭಾರತೀಯ ನಾರಿಯ ಲಕ್ಷಣವಲ್ಲ ಎಂದು ಉಲ್ಲೇಖಿಸಿದ್ದ ಪದಗಳನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ತೀರ್ಪಿನಿಂದ ತೆಗೆದು ಹಾಕಿದೆ.  

ಈ ಕುರಿತು ರಾಜ್ಯ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ. 

ಪ್ರಾಸಿಕ್ಯೂಷನ್ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರ ಆರೋಪಿ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಗೆ ನಮ್ಮ ತಕರಾರು ಇಲ್ಲ ಎಂದು ಲಿಖಿತ ಉತ್ತರ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News