ಮಲ್ನಾಡ್ ಗಲ್ಫ್ ಅಸೋಸಿಯೇಷನ್: ಬಾಳೆಹೊನ್ನೂರು ವಲಯದ ನೂತನ ಕಾರ್ಯಕಾರಿಣಿ ಸಮಿತಿ ರಚನೆ

Update: 2020-07-04 13:15 GMT

ಬಾಳೆಹೊನ್ನೂರು: ಮಲ್ನಾಡ್ ಗಲ್ಪ್ ಅಸೋಸಿಯೇಷನ್ (ಎಮ್.ಜಿ.ಎ) ಇದರ ಬಾಳೆಹೊನ್ನೂರು ವಲಯದ (ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲ್ಲೂಕುಗಳನ್ನೊಳಗೊಂಡ) ನೂತನ ಸಮಿತಿಯ ರಚನೆ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.

ಮಹಮ್ಮದ್ ರಫೀಕ್ ಜಯಪುರ ಇವರ ಕಿರಾತ್ ಪಾರಾಯಣದೊಂದಿಗೆ ಸಭೆ ಪ್ರಾರಂಭವಾಯಿತು. ಅನ್ವರ್ ಅಸ್ಸಾದಿ ತಲಗೂರು ದುಆ ಮತ್ತು ಆಶೀರ್ವಚನ ನೀಡಿದರು. ಎಮ್.ಜಿ.ಎ ಜಿದ್ದಾ ಘಟಕದ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಗಬ್ಗಲ್ ಸ್ವಾಗತ ಭಾಷಣ ನೆರವೇರಿಸಿದರು.

ಬಾಳೆಹೊನ್ನೂರು ಹೊಸ ಸಮಿತಿಯ ಕಾರ್ಯ ಚಟುವಟಿಕೆ, ಹೊಸ ಸಮಿತಿ ರಚನೆ ಮತ್ತು ರೂಪುರೇಷಗಳ ಬಗ್ಗೆ ಅಂತರ್ ರಾಷ್ಟ್ರೀಯ ಸಂಯೋಜಕ ಮತ್ತು ದಮ್ಮಾಮ್ ಖೋಬರ್ ಘಟಕದ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಜಯಪುರ ವಿವರಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷ ಶರೀಪ್ ಕಳಸರವರು ಸಭೆಯನ್ನುದ್ಧೇಶಿಸಿ ಮಾತನಾಡಿ, ಎಮ್.ಜಿ.ಎ ಸಂದೇಶ ಸಾರಿದರು.

ಚಿಕ್ಕಮಗಳೂರು ಜಿಲ್ಲಾ ಎಮ್.ಜಿ.ಎ ಸಂಚಾಲಕರಾದ ಇರ್ಷಾದ್ ಚಕ್ಕಮಕ್ಕಿ ಮುಖ್ಯ ಚುನಾವಣಾದಿಕಾರಿಯಾಗಿ ಭಾಗವಹಿಸಿದರು.

ಜಿದ್ದಾ ಝೋನ್ ಅಧ್ಯಕ್ಷ ಮುಸ್ತಾಕ್ ಗಬ್ಗಲ್ ಮತ್ತು ಎಮ್ .ಜಿ .ಎ. ಕೇಂದ್ರೀಯ ಸಮಿತಿಯ ಗೌರವಾಧ್ಯಕ್ಷ  ಬಶೀರ್ ಬಾಳ್ಳುಪೇಟೆ ಹೊಸ ಸಮಿತಿಗೆ ಶುಭ ಕೋರಿ ಹಿತವಚನಗಳನ್ನು ನೀಡಿದರು.

ದಮ್ಮಾಮ್ ಖೋಬರ್ ಘಟಕದ ಪ್ರಧಾನ ಕಾರ್ಯದರ್ಶಿ ಅಸ್ಗರ್ ತಲಗೂರು ರವರು ಕತರ್ ನಲ್ಲಿ ಹೊಸ ಸಮಿತಿ ರಚಿಸುವ ಬಗ್ಗೆ ಇಫ್ತಿಕಾರ್ ಅಹಮದ್ ಬಾಳೆಹೊನ್ನೂರು ರವರ ಸಹಕಾರ ಕೇಳಿದರು. ಹೊಸದಾಗಿ ಚುನಾಯಿತರಾದ ವಹೀದ್ ಮಾಗುಂಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಿಯಾದ್ ಘಟಕದ ಪ್ರಧಾನ ಕಾರ್ಯದರ್ಶಿ ನಝೀರ್ ಜಯಪುರರವರು ಕಾರ್ಯಕ್ರಮದ ಎಲ್ಲಾ ಚರ್ಚೆ, ಅನುಮೋದನೆ, ತೀರ್ಮಾನಗಳನ್ನು ಸಭೆಗೆ ವಿವರಿಸಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಶೀದ್ ಅಹಮದ್ ವಂದಿಸಿದರು.

ಹೊಸ ಸಮಿತಿಯ ವಿವರ:

ಅಧ್ಯಕ್ಷ: ಅಬ್ದುಲ್ ವಹೀದ್ ಮಾಗುಂಡಿ

ಗೌರವಾಧ್ಯಕ್ಷ: ಇಬ್ರಾಹಿಮ್ ಮಮ್ಮುನ್ಞಿ ಕಳಸ

ಉಪಾಧ್ಯಕ್ಷ: ಝಮೀರ್ ಮೂಸಬ್ಬ ಬಾಳೆಹೊನ್ನೂರು

ಪ್ರಧಾನ ಕಾರ್ಯದರ್ಶಿ: ಅಬ್ದುಲ್ ಹಕ್ -ಶಾಂತಿಪುರ

ಖಜಾಂಚಿ: ರಝೀನ್ ಅಬ್ದುಲ್ ಕಾದರ್ ಗಬ್ಗಲ್

ಸಹ ಕಾರ್ಯದರ್ಶಿ: ಇಬ್ರಾಹಿಮ್ ಶಾಫಿ ಬಾಳೆಹೊನ್ನೂರು

ಹಿರಿಯ ಸಲಹೆಗಾರರು

ನಾಸಿರ್ ಬಾಳೆಹೊನ್ನೂರು- ಜಿದ್ದಾ, ಇಫ್ತಿಕಾರ್ ಅಹಮದ್ ಬಾಳೆಹೊನ್ನೂರು ಕತರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News