ಅರುಣಾಚಲ ಪ್ರದೇಶದಲ್ಲಿ ಗುಡ್ಡ ಕುಸಿತ: ಕರ್ತವ್ಯದಲ್ಲಿದ್ದ ಹಾಸನದ ಯೋಧ ಮೃತ್ಯು

Update: 2020-07-05 16:40 GMT

ಹಾಸನ, ಜು.5: ಗಡಿ ಕಾಯುತ್ತಿರುವಾಗ ಸಂಭವಿಸಿದ ಆಕಸ್ಮಿಕ ಗುಡ್ಡ ಕುಸಿತದಿಂದಾಗಿ ಜಿಲ್ಲೆಯ ಅರಕಲಗೂಡು ತಾಲೂಕಿನ ಕಸಬಾ ಹೋಬಳಿ ಅತ್ನಿ ಗ್ರಾಮದ ಮಂಜೇಗೌಡರ ಪುತ್ರ ಮಲ್ಲೇಶ್ ಸಾವನ್ನಪ್ಪಿದ್ದಾರೆ.

ಅರುಣಾಚಲ ಪ್ರದೇಶದ ಟ್ಯಾಟ್ಯೂಡಿಗ್ಲಿ ಭಾಗದ ಎತ್ತರದ ಪ್ರದೇಶದಲ್ಲಿ ಗಡಿ ಕಾಯುತ್ತಿರುವಾಗ ಆಕಸ್ಮಿಕವಾಗಿ ಗುಡ್ಡ ಕುಸಿದಿದೆ. ಈ ವೇಳೆ ಗಂಭೀರ ಗಾಯಗೊಂಡ ಮಲ್ಲೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಲ್ಲೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇವರ ಸೇವಾ ಅವಧಿ ಮುಗಿದಿದ್ದು, ವಾಪಸ್ ತವರಿಗೆ ಬರುವವರಿದ್ದರು. ಅಷ್ಟರಲ್ಲಾಗಲೇ ಈ ಘಟನೆ ಸಂಭವಿಸಿದೆ. ಯೋಧನ ಪಾರ್ಥಿವ ಶರೀರ ಸೋಮವಾರ ಸಂಜೆ ಇಲ್ಲವೇ ಮಂಗಳವಾರ ಬೆಳಗ್ಗೆ ಹಾಸನಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News