ಕೊರೋನ ಸೋಂಕು ದೃಢಪಟ್ಟ ಬಳಿಕ ಯುವಕ ಪರಾರಿ

Update: 2020-07-05 17:11 GMT
ಸಾಂದರ್ಭಿಕ ಚಿತ್ರ

ಹಾವೇರಿ, ಜು.5: ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದ ಯುವಕನೋರ್ವ, ಸೋಂಕು ದೃಢಪಟ್ಟಿರುವ ಹಿನ್ನೆಲೆ ಪರಾರಿಯಾಗಿರುವ ಘಟನೆ ನಡೆದಿದೆ.

ರಟ್ಟೀಹಳ್ಳಿ ತಾಲೂಕಿನ ಪರ್ವತಶಿದ್ಗೇರಿ ಗ್ರಾಮದ ಯುವಕ ಪರಾರಿ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ರವಿವಾರ ಯುವಕನ ಮೊಬೈಲಿಗೆ ಕೊರೋನ ಸೋಂಕು ಇರುವುದಾಗಿ ಸಂದೇಶ ರವಾನೆ ಆಗಿದೆ. ತದನಂತರ, ಮೊಬೈಲ್‍ಗೆ ಹಾನಿ ಮಾಡಿ ಪರಾರಿ ಆಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ರಟ್ಟೀಹಳ್ಳಿ ಠಾಣಾ ಪೊಲೀಸರು ಸೋಂಕಿತನ ಹುಡುಕಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News