ಹೋಂ ಕ್ವಾರಂಟೈನ್‌ಗೆ ಒಳಗಾದ ಮೂಡಿಗೆರೆ ಶಾಸಕ

Update: 2020-07-09 06:40 GMT

ಚಿಕ್ಕಮಗಳೂರು, ಜು.9: ಕೊರೋನಾ ಸೋಂಕಿಗೆ ತುತ್ತಾಗಿರುವ ಮೂಡಿಗೆರೆಯ ವಿಧಾನ ಪರಿಷತ್ ಸದಸ್ಯರೊಂದಿಗೆ ತಿರುಗಾಡಿದ್ದ ಹಾಗೂ ಬೆಂಗಳೂರಿಗೆ ಹೋಗಿ ಬಂದಿದ್ದ ಹಿನ್ನೆಲೆಯಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ವಇಚ್ಛೆಯಿಂದ ಹೋಂ ಕ್ವಾರಂಟೈನ್ ಆಗಿದ್ದಾರೆ.

ಬೆಂಗಳೂರಿನಿಂದ ಊರಿಗೆ ಹಿಂದಿರುಗಿದ ಬಳಿಕ ಶಾಸಕ ಕುಮಾರಸ್ವಾಮಿ ಹಲವೆಡೆ ಓಡಾಡಿದ್ದರು. ಎಂಎಲ್ಸಿ ಪ್ರಾಣೇಶ್ ಅವರೊಂದಿಗೆ ಜೂನ್ 29ರಂದು ಕೆಡಿಪಿ ಸಭೆಯಲ್ಲಿ ಭಾಗಿಯಾಗಿದ್ದರು. ಅದೇ ಕೆಡಿಪಿ ಸಭೆಯಲ್ಲಿ ಭಾಗಿಯಾಗಿದ್ದ 36ಕ್ಕೂ ಹೆಚ್ಚು ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಕ್ವಾರಂಟೈನ್ ಆಗಿದ್ದರು. ಆದರೆ ಕ್ವಾರಂಟೈನ್ ಆಗಲು ಹಿಂದೇಟು ಹಾಕಿದ್ದ ಶಾಸಕ ಕುಮಾರಸ್ವಾಮಿ ಪರೀಕ್ಷೆಗೆ ಕೂಡಾ ಒಳಗಾಗಿರಲಿಲ್ಲ. ಅಲ್ಲದೇ ಸಚಿವ ಸಿ.ಟಿ ರವಿ ಜೊತೆ ಓಡಾಟ ನಡೆಸಿ ಬಳಿಕ ಬೆಂಗಳೂರಿಗೂ ಹೋಗಿ ನಿನ್ನೆ ಹಿಂದಿರುಗಿದ್ದರು. ಕೊನೆಗೆ ಜಿಲ್ಲಾಧಿಕಾರಿಯವರ ಸೂಚನೆಯಂತೆ ಶಾಸಕ ಕುಮಾರಸ್ವಾಮಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News