‘ವಿಕಾಸ್ ದುಬೆ ಎನ್ ಕೌಂಟರ್ ಆಗಲಿದೆ ಎಂದು ಭವಿಷ್ಯ ನುಡಿದವರು ಎಲ್ಲಿದ್ದಾರೆ?’

Update: 2020-07-10 14:33 GMT

ಹೊಸದಿಲ್ಲಿ: ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ನಿನ್ನೆ ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಇಂದು ಬೆಳಗ್ಗೆ ಆತನನ್ನು ಎನ್ ಕೌಂಟರ್ ನಲ್ಲಿ ಕೊಲ್ಲಲಾಗಿದೆ. ಈ ನಡುವೆ ಗುರುವಾರ ವಿಕಾಸ್ ದುಬೆ ಬಂಧನಕ್ಕೆ ಸಂಬಂಧಿಸಿ ಎಂದಿನಂತೆ ಕಿರುಚಾಡಿದ್ದ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಗೆ ತಮ್ಮ ಹೇಳಿಕೆಯೇ ಈಗ ತಿರುಗುಬಾಣವಾಗಿದೆ.

ನಿನ್ನೆ ತಮ್ಮ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅರ್ನಬ್ ಗೋಸ್ವಾಮಿ ವಿಕಾಸ್ ದುಬೆಯನ್ನು ನಕಲಿ ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗುತ್ತದೆ ಎನ್ನುವ ಸಾಮಾಜಿಕ ಜಾಲತಾಣದ ಬಳಕೆದಾರರ ಭವಿಷ್ಯವನ್ನು ನಿರಾಕರಿಸಿದ್ದರು. “ಎಲ್ಲಿ ಎನ್ ಕೌಂಟರ್?” ಎಂದು ಬೊಬ್ಬಿಟ್ಟಿದ್ದ ಅವರ ಮಾತಿಗೆ ಪ್ಯಾನೆಲ್ ನಲ್ಲಿದ್ದ ಕೆಲವರು ದನಿಗೂಡಿಸಿದ್ದರು.

ಆದರೆ ಗೋಸ್ವಾಮಿ ಪ್ರತಿಪಾದಿಸಿದ್ದ ಎಲ್ಲವೂ ಶುಕ್ರವಾರ ಬೆಳಗ್ಗೆ ಸುಳ್ಳಾಗಿತ್ತು. ವಿಕಾಸ್ ದುಬೆಯನ್ನು ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆಗೈಲಾಗಿತ್ತು. ಆತ ರಿವಾಲ್ವರ್ ಕಿತ್ತು ತಪ್ಪಿಸಿಕೊಳ್ಳಲು ಮತ್ತು ಗುಂಡು ಹಾರಿಸಲು ಯತ್ನಿಸಿದಾಗ ಆತನನ್ನು ಹತ್ಯೆಗೈಯಲಾಯಿತು ಎಂದು ಪೊಲೀಸರು ಹೇಳಿದ್ದರು.

ಈ ಎನ್ ಕೌಂಟರ್ ನಡೆದ ಮೇಲೆ ಅರ್ನಬ್ ಗೋಸ್ವಾಮಿಯ ಈ ವಿಡಿಯೋ ವೈರಲ್ ಆಗಿದೆ.  ಕಾಮಿಡಿಯನ್ ಕುನಾಲ್ ಕಾಮ್ರಾ ಇದೇ ವಿಡಿಯೋವನ್ನು ಪೋಸ್ಟ್ ಮಾಡಿ ಅಳುವ ಇಮೋಜಿಯನ್ನು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News