ದಾವಣಗೆರೆ ಜಿಲ್ಲೆಯಲ್ಲಿಂದು 20 ಜನರಿಗೆ ಕೊರೋನ ಪಾಸಿಟಿವ್, ಮೂವರು ಬಲಿ

Update: 2020-07-12 18:24 GMT

ದಾವಣಗೆರೆ, ಜು.12: ಜಿಲ್ಲೆಯಲ್ಲಿ ರವಿವಾರ 20 ಜನರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 21ಕ್ಕೇರಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ. ಅಲ್ಲದೇ ರವಿವಾರ 66 ಜನರು ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ 410 ಜನರು ಗುಣಮುಖರಾಗಿದ್ದಾರೆ. ಇನ್ನು 104 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆಯಲ್ಲಿ 14 ಜನರಲ್ಲಿ ಸೋಂಕು ದೃಢಪಟ್ಟಿದೆ. ಮಿಲತ್ ಕಾಲೋನಿ, ಎನ್‍ಆರ್ ರಸ್ತೆಯಲ್ಲಿ ಇಬ್ಬರಿಗೆ, ಜ್ಞಾನಶಂಕರ ಬಡಾವಣೆಯ ಒಬ್ಬ, ನಿಟುವಳ್ಳಿಯ ಒಬ್ಬ, ಭಗತಸಿಂಗ್ ನಗರ, ದೊಡ್ಡಬಾತಿ, ಆಹಮದ್ ನಗರ, ಎಂಸಿಸಿ ಬಿ ಬ್ಲಾಕ್, ಕೆಬಿ ಬಡಾವಣೆ, ಸಿದ್ದವೀರಪ್ಪ ಬಡಾವಣೆ, ಕುವೆಂಪು ನಗರ, ಭರತ್ ಮಿಲ್ ಕಾಂಪೌಂಡ್, ಜಗಳೂರಿನ ಇಬ್ಬರಿಗೆ, ಹೊನ್ನಾಳ್ಳಿಯ ಬಿದರಹಳ್ಳಿ ಗ್ರಾಮ, ಚಿನ್ನಿಕಟ್ಟಿಗ್ರಾಮದ ಓರ್ವನಿಗೆ, ಹರಿಹರದ ಇಬ್ಬರಿಗೆ ಸೋಂಕು ದೃಢಪಟ್ಟಿವೆ.

12 ಜನರಿಗೆ ಐಎಲ್‍ಐ, ಇಬ್ಬರಿಗೆ ಸಾರಿ ಪ್ರಕರಣಗಳು ಪತ್ತೆಯಾಗಿವೆ. 299 ಜನರ ಗಂಟಲು ಮಾದರಿಯ ವರಿದಿ ಫಲಿತಾಂಶ ನೆಗಟಿವ್ ಬಂದಿದೆ. ಇನ್ನು 4915 ಮಾದರಿಗಳ ಫಲಿತಾಂಶ ಬರಬೇಕಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News