ಹಿಂದಿನ ಲಾಕ್‍ಡೌನ್ ವ್ಯರ್ಥ ಮಾಡಿಕೊಂಡ ರೀತಿ ಇದನ್ನೂ ಮಾಡದಿರಿ: ದಿನೇಶ್ ಗುಂಡೂರಾವ್

Update: 2020-07-13 12:09 GMT

ಬೆಂಗಳೂರು, ಜು.13: ಬೆಂಗಳೂರು ಮತ್ತೊಮ್ಮೆ ಲಾಕ್‍ಡೌನ್ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ರಾಜ್ಯ ಸರಕಾರ ಹಿಂದಿನ ಲಾಕ್‍ಡೌನ್ ವ್ಯರ್ಥ ಮಾಡಿಕೊಂಡ ರೀತಿ ಇದನ್ನೂ ಮಾಡಿಕೊಳ್ಳದಿರಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸೋಮವಾರ ಈ ಕುರಿತು ಟ್ವಿಟ್ ಮಾಡಿರುವ ಅವರು, ರಾಜಧಾನಿ ಬೆಂಗಳೂರು ಲಾಕ್‍ಡೌನ್ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆಡಳಿತವು ವೈರಸ್‍ನ ಹರಡುವಿಕೆ ತಡೆಯಲು ಅಗತ್ಯ ಪರಿಣಾಮಕಾರಿ ಕ್ರಮಕೈಗೊಳ್ಳುವ ವಿಚಾರದಲ್ಲಿ ಕಳೆದ ಲಾಕ್‍ಡೌನ್ ವೇಳೆ ಸರಿಯಾದ ತಯಾರಿ ಮಾಡಿಕೊಳ್ಳದೆ ಅದನ್ನು ವ್ಯರ್ಥವಾಗಿಸಿತ್ತು. ಇದೂ ಆ ಹಾದಿ ತುಳಿಯದಿರಲಿ ಎಂದು ನುಡಿದಿದ್ದಾರೆ

ರಾಜ್ಯ ಸರಕಾರ ಪರಿಣಾಮಕಾರಿಯಾಗಿ ಕೋವಿಡ್-19 ನಿಯಂತ್ರಣ ಮಾಡುತ್ತಿಲ್ಲ ಎಂದು ಪ್ರತಿಪಕ್ಷ ನಿರಂತರವಾಗಿ ಹೇಳುತ್ತಾ ಬಂದಿದೆ. ಆದರೆ, ಮತ್ತೊಂದು ಕಡೆ ರೋಗ ನಿಯಂತ್ರಣದಲ್ಲಿದೆ ಎಂದು ಸರಕಾರ ಹೇಳಿದೆ. ಒಂದು ಸಮಯ ಇಡೀ ದೇಶದಲ್ಲಿ 11ನೆ ಸ್ಥಾನದಲ್ಲಿದ್ದ ಕರ್ನಾಟಕ ಸದ್ಯ 5ನೆ ಸ್ಥಾನದಲ್ಲಿದ್ದು, ಒಂದೆರಡು ದಿನದಲ್ಲಿ ಗುಜರಾತ್ ಮೀರಿಸಿ ಮುಂದೆ ಸಾಗಲಿದೆ. ಈ ಸಂದರ್ಭ ಸರಕಾರವನ್ನು ಎಚ್ಚರಿಸುವ ಕಾರ್ಯವನ್ನು ಪ್ರತಿಪಕ್ಷವಾಗಿ ಕಾಂಗ್ರೆಸ್ ಮೇಲಿಂದ ಮೇಲೆ ಮಾಡುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News