ಕೊರೋನ ಭೀತಿಯಿಂದ ಸ್ಮಶಾನವನ್ನೇ ಸೀಲ್‍ಡೌನ್ ಮಾಡಿದ ಗ್ರಾಮಸ್ಥರು

Update: 2020-07-13 12:47 GMT

ವಿಜಯಪುರ, ಜು.13: ಕೊರೋನದಿಂದ ಮೃತಪಟ್ಟವರ ದೇಹವನ್ನು ಸ್ಮಶಾನದಲ್ಲಿ ಹೂತಿದ್ದಾರೆ ಎಂದು ಸ್ಥಳೀಯರು ಸ್ಮಶಾನದ ಜಾಗವನ್ನೇ ಸೀಲ್ ಡೌನ್ ಮಾಡಿದ ಘಟನೆ ನಡೆದಿದೆ.

ವಿಜಯಪುರ ನಗರದ ಚಾಲುಕ್ಯ ನಗರದಲ್ಲಿನ ಸ್ಮಶಾನವನ್ನು ಸುತ್ತಮುತ್ತಲಿನ ನಿವಾಸಿಗಳು ಸೀಲ್ ಡೌನ್ ಮಾಡಿದ್ದಾರೆ. 

ಪಿಪಿಇ ಕಿಟ್ ಧರಿಸಿ ಸಿದ್ಧೇಶ್ವರ ಸಂಸ್ಥೆಯ ಸ್ಮಶಾನದಲ್ಲಿ ಕೊರೋನದಿಂದ ಮೃತಪಟ್ಟವರ ದೇಹವನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದು, ಸ್ಮಶಾನದ ಗೇಟಿಗೆ ಮುಳ್ಳುಗಳನ್ನಿಟ್ಟು ಸೀಲ್ ಡೌನ್ ಮಾಡಿದ್ದಾರೆ. ಅಲ್ಲದೇ, ಕೊರೋನ ಹಾವಳಿ ಮುಗಿಯುವವರೆಗೂ ಯಾರೂ ಅಂತ್ಯಕ್ರಿಯೆ ಮಾಡುವುದೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News