ಶಿವಮೊಗ್ಗದಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

Update: 2020-07-15 11:36 GMT

ಶಿವಮೊಗ್ಗ, ಜು.15: ಶಿವಮೊಗ್ಗ ಹೊರ ವಲಯದ ಬಸವನಗಂಗೂರು ಬಳಿಯ ತುಂಗಾ ಮೇಲ್ಡಂಡೆ ಕಾಲುವೆಯ ಸೇತುವೆ ಬಳಿ ರೌಡಿ ಶೀಟರ್ ನನ್ನು ಭೀಕರವಾಗಿ ಕೊಲೆಗೈದ ಘಟನೆ ನಡೆದಿದೆ.

ನಾಗೇಶ ಅಲಿಯಾಸ್ ನವಲೆ ನಾಗೇಶ (30) ಕೊಲೆಯಾದ ರೌಡಿ ಶೀಟರ್. ನಾಗೇಶ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ.

ಮಂಗಳವಾರ ರಾತ್ರಿ ಮನೆಯಲ್ಲಿದ್ದ ನಾಗೇಶನನ್ನು ಕೆಲ ಯುವಕರು ಬಂದು ಕರೆದುಕೊಂಡು ಹೋಗಿದ್ದು, ಬೆಳಗ್ಗೆ ವೇಳೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಕೆಲ ತಿಂಗಳ ಹಿಂದೆ ಇದೇ ನವಲೆಯ ಸಿದ್ದಾರ್ಥ ಎಂಬ ರೌಡಿಶೀಟರ್ ಕುಡಿದ ಮತ್ತಿನಲ್ಲಿ ಬಿಲ್ಡಿಂಗ್ ಮೇಲಿಂದ ಬಿದ್ದು ಸಾವನಪ್ಪಿದ್ದ. ಇದಕ್ಕೆ ನಾಗೇಶನೇ ಕಾರಣ ಎಂದು ಹೇಳಲಾಗಿತ್ತು. ಇದೇ ದ್ವೇಷದಿಂದ ಸಿದ್ದನ ಗೆಳೆಯರು ಕೊಲೆ ಮಾಡಿರಬಹುದು ಎಂಬ ಆರೋಪ ಕೇಳಿಬರುತ್ತಿದೆ. 

ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News