ಭಗವಂತನೇ ಕಾಪಾಡಬೇಕು ಎನ್ನುವ ಸರಕಾರ ಅಧಿಕಾರದಲ್ಲಿರಲು ಲಾಯಕಲ್ಲ: ಈಶ್ವರ್ ಖಂಡ್ರೆ

Update: 2020-07-16 12:53 GMT

ಬೆಂಗಳೂರು, ಜು. 16: `ಲಾಕ್‍ಡೌನ್ ಅಂತೆ ಲಾಕ್‍ಡೌನ್ ಬದನೆಕಾಯಿ.. ಸರಕಾರ ಕಾಟಾಚಾರಕ್ಕೆ ಲಾಕ್‍ಡೌನ್ ಮಾಡಿದೆ. ಈ ವಿಚಾರದಲ್ಲಿ ಗಂಭೀರತೆ ಕಾಣಿಸುತ್ತಿಲ್ಲ. ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಲು ಸರಕಾರ ವಿಫಲವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಬಿ.ಖಂಡ್ರೆ ಆರೋಪ ಮಾಡಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, `ಸರಕಾರ ಕೊರೋನ ಸೋಂಕು ತಡೆಯಲು ಲಾಕ್‍ಡೌನ್ ವಿಧಿಸಿದೆಯೋ ಅಥವಾ ಸೋಂಕು ಹರಡಲು ವಿಧಿಸಿದೆಯೋ? ತನ್ನ ಜವಾಬ್ದಾರಿಯಿಂದ ನುಣಚಿಕೊಂಡು, ಜನರನ್ನ ಕೋವಿಡ್ ದವಡೆಗೆ ತಳ್ಳಿ ಈಗ ಭಗವಂತನೇ ಕಾಪಾಡಬೇಕು ಎನ್ನುವ ಸರಕಾರ ಅಧಿಕಾರದಲ್ಲಿರಲು ಲಾಯಕಲ್ಲ. ಸುಮ್ಮನೆ ರಾಜೀನಾಮೆ ಕೊಟ್ಟು ಮನೆಗೆ ತೆರಳಿ' ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News