ಹಿರಿಯ ಫುಟ್ಬಾಲ್ ಆಟಗಾರ ಪುಟ್ಟಸ್ವಾಮಿ ನಿಧನ

Update: 2020-07-19 15:15 GMT

ಬೆಂಗಳೂರು, ಜು.19: ಫುಟ್ಬಾಲ್ ಹಿರಿಯ ಆಟಗಾರ ಟಿ.ಪುಟ್ಟಸ್ವಾಮಿ(79) ನಿಧನ ಹೊಂದಿದ್ದು, ರವಿವಾರ ಅಂತ್ಯಕ್ರಿಯೆ ಜರುಗಿಸಲಾಯಿತು.

ಸಂತೋಷ್ ಟ್ರೋಫಿ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಉಪಕ್ಯಾಪ್ಟನ್ ಆಗಿ ಪ್ರತಿನಿಧಿಸಿದ್ದ ಟಿ.ಪುಟ್ಟಸಾಮಿ ಅವರು ಚಾಮರಾಜಪೇಟೆಯ ನಿವಾಸದಲ್ಲಿ ಶನಿವಾರ ರಾತ್ರಿ ನಿಧನ ಹೊಂದಿದ್ದಾರೆ.

ಟಿ.ಪುಟ್ಟಸ್ವಾಮಿ ಬಿಡಿಎಫ್‍ಎ ಸದಸ್ಯ ಮತ್ತು ಕೆಎಸ್‍ಎಫ್‍ಎ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದ ನ್ಯಾಚುರಲ್ ಟರ್ಫ್ ಮೈದಾನದ ಮೇಲ್ವಿಚಾರಕರಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಪುಟ್ಬಾಲ್ ಸಂಘವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News