ಸೋಮವಾರಪೇಟೆ: ಮರದಿಂದ ಬಿದ್ದ ಕಾರ್ಮಿಕ ಮೃತ್ಯು

Update: 2020-07-22 17:43 GMT

ಸೋಮವಾರಪೇಟೆ: ಮರದಿಂದ ಬಿದ್ದ ಕಾರ್ಮಿಕ ಮೃತಪಟ್ಟಿರುವ ಘಟನೆ ಅಬ್ಬೂರುಕಟ್ಟೆ ಕಾಫಿ ತೋಟದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ತಣ್ಣೀರುಹಳ್ಳ ಗ್ರಾಮದ ಗಣೇಶ್(48) ಮೃತ ಕಾರ್ಮಿಕ. ಶಾಂತಕುಮಾರ್ ಎಂಬವರ ತೋಟದಲ್ಲಿ ಮರಕಪಾತು ಮಾಡುತ್ತಿದ್ದ ಸಂದರ್ಭ ಘಟನೆ ನಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಬೇಬಿ, ಮಕ್ಕಳಾದ ರಂಜಿತಾ, ಅನಿಲ್ ಕುಮಾರ್ ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News