×
Ad

ಕೊರೋನ ವೈರಸ್: ರಾಜ್ಯದಲ್ಲಿ ಮತ್ತೆ 5,072 ಮಂದಿಗೆ ಸೋಂಕು ದೃಢ; 72 ಮಂದಿ ಸಾವು

Update: 2020-07-25 20:44 IST

ಬೆಂಗಳೂರು, ಜು.25: ರಾಜ್ಯದಲ್ಲಿ ಕೆಲದಿನಗಳಿಂದ ಮಹಾಮಾರಿ ಕೊರೋನ ಸೋಂಕು ಆತಂಕಕಾರಿ ಸ್ಥಿತಿಯಲ್ಲಿ ಏರುತ್ತಿದೆ. ದೈನಂದಿನ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಸತತ ಮೂರನೇ ದಿನ 5 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 90 ಸಾವಿರದ ಗಡಿ ದಾಟಿದೆ.

ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ ಮತ್ತೆ 5,072 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 90,942 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 72 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 1,796ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 29 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರು 8, ದಕ್ಷಿಣ ಕನ್ನಡ 8, ಬೆಳಗಾವಿ 5, ಧಾರವಾಡ 4, ಕಲಬುರ 4, ಹಾವೇರಿ, ಶಿವಮೊಗ್ಗ, ಕೊಪ್ಪಳ, ಚಿಕ್ಕಬಳ್ಳಾಪುರ ಮತ್ತು ಹಾಸನದಲ್ಲಿ ತಲಾ 2, ಯಾದಗಿರಿ, ಗದಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2,036, ಬೆಳಗಾವಿ 341, ಬಳ್ಳಾರಿ 222,  ದಕ್ಷಿಣ ಕನ್ನಡ 218, ಮೈಸೂರು 187, ಕಲಬುರಗಿ 183, ಧಾರವಾಡ 183, ಉಡುಪಿ 182, ವಿಜಯಪುರ 175, ಉತ್ತರ ಕನ್ನಡ 155, ಬೆಂಗಳೂರು ಗ್ರಾಮಾಂತರ 154, ಹಾಸನ 151,  ಚಿಕ್ಕಬಳ್ಳಾಪುರ 101, ದಾವಣಗೆರೆ 79, ಯಾದಗಿರಿ 68, ರಾಯಚೂರು 68, ಕೋಲಾರ 68, ಬೀದರ್ 62, ಗದಗ 61, ಮಂಡ್ಯ 60, ಬಾಗಲಕೋಟೆ 57, ಹಾವೇರಿ 52, ಶಿವಮೊಗ್ಗ 42, ಚಿಕ್ಕಮಗಳೂರು 42, ಕೊಪ್ಪಳ 31, ತುಮಕೂರು 27, ಚಾಮರಾಜನಗರ 22, ರಾಮನಗರ 20, ಚಿತ್ರದುರ್ಗ 16, ಕೊಡಗು ಜಿಲ್ಲೆಯಲ್ಲಿ 9 ಪ್ರಕರಣ ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 90,942 ಕೊರೋನ ಸೋಂಕಿತರ ಪೈಕಿ 33,750 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 2,403 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 1,796 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 55,388 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News