ರಾಜ್ಯಸಭೆಯ ಉಪಸಭಾಪತಿಯ ಸಮಿತಿಗೆ ಡಾ.ಎಲ್.ಹನುಮಂತಯ್ಯ ಆಯ್ಕೆ

Update: 2020-07-25 18:00 GMT

ಬೆಂಗಳೂರು, ಜು.24: ರಾಜ್ಯಸಭೆಯ ಉಪಸಭಾಪತಿಯ ಸಮಿತಿಗೆ ರಾಜ್ಯದ ಹಿರಿಯ ಸಾಹಿತಿ, ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಸೇರಿದಂತೆ ಆರು ಮಂದಿಯನ್ನು ಶನಿವಾರ ಆಯ್ಕೆ ಮಾಡಿ ರಾಜ್ಯಸಭೆಯ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಆದೇಶ ಹೊರಡಿಸಿದ್ದಾರೆ.

ಡಾ.ಎಲ್.ಹನುಮಂತಯ್ಯ ಜೊತೆಯಲ್ಲಿ ಅಸ್ಸಾಂ ರಾಜ್ಯದ ಕಾಂಗ್ರೆಸ್ ಸದಸ್ಯ ಭುಬನೇಶ್ವರ್ ಕಲಿಟಾ, ಮಹಾರಾಷ್ಟ್ರದ ಎನ್‍ಸಿಪಿ ಪಕ್ಷದ ಸದಸ್ಯೆ ವಂದನಾ ಚೌವಾಣ್, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸದಸ್ಯ ಸುಕೇಂದು ಶೇಖರ್ ರಾಯ್, ಉತ್ತರಪ್ರದೇಶದ ಬಿಎಸ್ಪಿ ಸದಸ್ಯ ಸುರೇಂದ್ರ ಸಿಂಗ್ ನಗರ್ ಹಾಗೂ ಓಡಿಶಾದ ಬಿಜು ಜನತಾ ದಳ ಪಕ್ಷದ ಸದಸ್ಯ ಡಾ.ಸಸ್ಮಿತ್ ಪಾತ್ರ ಅವರನ್ನು ಉಪಸಭಾಪತಿಯ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಜ್ಯಸಭೆಯ ಮಹಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                              

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News