ಹೊಳಲೂರು: ವ್ಯಕ್ತಿಯೋರ್ವನನ್ನು ಇರಿದು ಕೊಲೆ
Update: 2020-07-28 09:21 GMT
ಶಿವಮೊಗ್ಗ, ಜು.28: ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಅವರ ತೋಟದಲ್ಲೇ ಹತ್ಯೆ ಮಾಡಿರುವ ಘಟನೆ ಹೊಳಲೂರು ಸಮೀಪ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೊಳಲೂರಿನ ಸಮೀಪ ಹೊಸಕೆರೆ ತೋಟದಲ್ಲಿ ಮಲ್ಲೇಶ್(38) ಕೊಲೆಯಾದ ವ್ಯಕ್ತಿ.ಮಲ್ಲೇಶ್ ತಮ್ಮ ತೋಟಕ್ಕೆ ತೆರಳಿದವರು ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮಂಗಳವಾರ ಬೆಳಗ್ಗೆ ತೋಟಕ್ಕೆ ಬಂದಿದ್ದರು. ಈ ವೇಳೆ ಹತ್ಯೆಯಾಗಿರುವುದು ಪತ್ತೆಯಾಗಿದೆ.
ಹತ್ಯೆಗೆ ಕಾರಣವೇನು ಎಂಬುದು ಇನ್ನಷ್ಟೆ ತಿಳಿಯಬೇಕಿದೆ.
ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.