ಶಿವಮೊಗ್ಗ: ಚೂರಿಯಿಂದ ಇರಿದು ಕೊಲೆ ವ್ಯಕ್ತಿಯ ಕೊಲೆ

Update: 2020-07-28 12:07 GMT

ಶಿವಮೊಗ್ಗ, ಜು.28: ತಾಲೂಕಿನ ಹೊಳಲೂರು ಗ್ರಾಮದ ತೋಟದಲ್ಲಿ ವ್ಯಕ್ತಿಯೋರ್ವನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ನಡೆದಿದೆ.

ಗ್ರಾಮದ ಮಲ್ಲೇಶ್ (38) ಕೊಲೆಯಾದ ವ್ಯಕ್ತಿ.

ಗ್ರಾಮದ ದಿವಂಗತ ಪಲ್ಲಪ್ಪನವರ ಮೂವರು ಪುತ್ರರಲ್ಲಿ ಹಿರಿಯರಾದ ಮಲ್ಲೇಶ್ ನಿನ್ನೆ ತಮ್ಮ ಹೊಸಕೆರೆ ತೋಟಕ್ಕೆ ಹೋದವರು ಮನೆಗೆ ಹಿಂತಿರುಗಲಿಲ್ಲ. ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಅವರ ಸಹೋದರ ತೋಟಕ್ಕೆ ಹೋಗಿ ಹುಡುಕಿದ ಸಂದರ್ಭದಲ್ಲಿ ಮಲ್ಲೇಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತು. 

ಘಟನೆಗೆ ಕಾರಣವೇನು ಎಂಬುದು ಇನ್ನಷ್ಟೆ ತಿಳಿಯಬೇಕಿದೆ. ಮಲ್ಲೇಶ್ ರವರ ಓರ್ವ ಸಹೋದರ ಪೊಲೀಸ್ ಇಲಾಖೆಯಲ್ಲಿ, ಇನ್ನೋರ್ವ ಸಹೋದರ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News