ರಾಜ್ಯದಲ್ಲಿ ಕೋವಿಡ್ ಹೊಸ ದಾಖಲೆ: ಮೊದಲ ಬಾರಿಗೆ ಒಂದೇ ದಿನ 6 ಸಾವಿರ ಪಾಸಿಟಿವ್

Update: 2020-07-30 14:20 GMT

ಬೆಂಗಳೂರು, ಜು.30: ರಾಜ್ಯದಲ್ಲಿ ಕೆಲದಿನಗಳಿಂದ ಮಹಾಮಾರಿ ಕೊರೋನ ಸೋಂಕು ಆತಂಕಕಾರಿ ಸ್ಥಿತಿಯಲ್ಲಿ ಏರುತ್ತಿದೆ. ದೈನಂದಿನ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಇದೇ ಮೊದಲ ಬಾರಿಗೆ 6 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 1.18 ಲಕ್ಷದ ಗಡಿ ದಾಟಿದೆ.

ಬುಧವಾರ ಸಂಜೆಯಿಂದ ಗುರುವಾರ ಸಂಜೆವರೆಗೆ ಮತ್ತೆ 6,128 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,18,632 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 83 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 2,230ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 22 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಮೈಸೂರು 9, ಧಾರವಾಡ 8, ದಕ್ಷಿಣ ಕನ್ನಡ 7, ಕಲಬುರಗಿ 7, ಹಾಸನ 6, ಉಡುಪಿ 4, ಬೆಳಗಾವಿ 4, ಉತ್ತರ ಕನ್ನಡ 2, ಬೀದರ್ 2, ಕೋಲಾರ 2, ಬಾಗಲಕೋಟೆ 2, ಶಿವಮೊಗ್ಗ, ಚಿಕ್ಕಮಗಳೂರು,  ತುಮಕೂರು, ಗದಗ, ದಾವಣಗೆರೆ, ಕೊಪ್ಪಳ, ಯಾದಗಿರಿ, ಹಾವೇರಿ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2,233, ಮೈಸೂರು 430, ಬಳ್ಳಾರಿ 343, ಉಡುಪಿ 248, ಬೆಂಗಳೂರು ಗ್ರಾಮಾಂತರ 224, ಕಲಬುರಗಿ 220, ಬೆಳಗಾವಿ 202, ದಕ್ಷಿಣ ಕನ್ನಡ 198, ಧಾರವಾಡ 180, ರಾಯಚೂರು 166, ಶಿವಮೊಗ್ಗ 143, ಬಾಗಲಕೋಟೆ 126, ಚಿಕ್ಕಮಗಳೂರು 126, ವಿಜಯಪುರ 124, ಉತ್ತರ ಕನ್ನಡ 120, ರಾಮನಗರ 106, ತುಮಕೂರು 104, ಹಾಸನ 94, ಗದಗ 88, ಮಂಡ್ಯ 87, ದಾವಣಗೆರೆ 86, ಚಿಕ್ಕಬಳ್ಳಾಪುರ 82, ಕೊಪ್ಪಳ 78, ಬೀದರ್ 69, ಹಾವೇರಿ 58, ಯಾದಗಿರಿ 58, ಚಿತ್ರದುರ್ಗ 47, ಕೋಲಾರ 32, ಚಾಮರಾಜನಗರ 32, ಕೊಡಗು ಜಿಲ್ಲೆಯಲ್ಲಿ 24 ಪ್ರಕರಣ ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 1,18,632 ಕೊರೋನ ಸೋಂಕಿತರ ಪೈಕಿ 46,694 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 3,793 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 2,230 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 69,700 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News