ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎಂದು ಸಿ.ಪಿ.ಯೋಗೇಶ್ವರ್ ಕಾಲಿಗೆ ಬಿದ್ದಿದ್ದ: ಡಿ.ಕೆ ಶಿವಕುಮಾರ್

Update: 2020-07-30 17:19 GMT

ಬೆಂಗಳೂರು, ಜು.30: 15 ದಿನಗಳ ಹಿಂದಷ್ಟೇ ನನ್ನ ಬಳಿಗೆ ಬಂದು, ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎಂದು ಕಾಲಿಗೆ ಬಿದ್ದಿದ್ದ ಸಿ.ಪಿ.ಯೋಗೇಶ್ವರ್ ಈ ರೀತಿ ಯಾಕೆ ಮಾತನಾಡಿದ್ದಾನೆ ಗೊತ್ತಿಲ್ಲ. ಅವನಿಗೆ ಹುಚ್ಚು ಹಿಡಿದಿದೆಯಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಯಡಿಯೂರಪ್ಪ ಅವರನ್ನ ಕೆಳಗೆ ಇಳಿಸ್ತಾರೆ, ಹೀಗಾಗಿ ಕಾಂಗ್ರೆಸ್‍ಗೆ ಬರುತ್ತೇನೆ ಅಂತ ಯೋಗೇಶ್ವರ್ ನನ್ನ ಬಳಿ ಚರ್ಚೆ ಮಾಡಿದ. ನೀನು ಪಕ್ಷಕ್ಕೆ ಬರುವುದು ಬೇಡ ಬಿಜೆಪಿಯಲ್ಲೇ ನಿಷ್ಠೆಯಿಂದ ಇರು ಎಂದು ಹೇಳಿ ಕಳುಹಿಸಿದೆ. ಈಗ ಯಾಕೆ ಹೀಗೆ ಮಾತಾಡಿದ್ದಾನೋ ಗೊತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News