ಬಕ್ರೀದ್ ಹಬ್ಬ ಸೌಹಾರ್ದದ ಸಂಬಂಧವನ್ನು ಬೆಸೆಯಲಿ‌: ಸಚಿವ ರಮೇಶ್ ಜಾರಕಿಹೊಳಿ‌

Update: 2020-07-31 07:41 GMT

ಬೆಂಗಳೂರು, ಜು. ೩೧: ತ್ಯಾಗ ಮತ್ತೆ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ ವು ಸೌಹಾರ್ದದ ಸಂಬಂಧವನ್ನು ಬೆಸೆಯಲಿ‌ ಎಂದು ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ‌ ಶುಭ ಹಾರೈಸಿದ್ದಾರೆ.

ವಿಶ್ವ ಭ್ರಾತೃತ್ವವನ್ನು ಸಾರುವ ಪವಿತ್ರ ಹಬ್ಬವಾದ ಬಕ್ರೀದ್ ನಾಡಿನಲ್ಲಿ ಸ್ನೇಹ‌ ಮತ್ತು ಸೌಹಾರ್ದತೆಯನ್ನು ಬೆಳೆಸಲು ಪ್ರೇರಣೆ ನೀಡಲಿ ಎಂದು ಸಚಿವರು ಹಬ್ಬದ ಶುಭಾಶಯ ಕೋರಿದ್ದಾರೆ.

ಹಲವು ಸವಾಲುಗಳ ನಡುವೆ ಬದುಕುತ್ತಿರುವ ಈ ಸಾಮಾಜಿಕ ಸನ್ನಿವೇಶದಲ್ಲಿ ಎಲ್ಲರೂ ಕೂಡ ಜವಾಬ್ದಾರಿಯಿಂದ ವರ್ತಿಸೋಣ. ಕೊರೋನ ಪಿಡುಗಿನ ಸಂಕಷ್ಟದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸುರಕ್ಷಿತ ಅಂತರ ಕಾಯ್ದುಕೊಂಡು ಸರಳವಾಗಿ ಬಕ್ರೀದ್ ಹಬ್ಬ ವನ್ನು ಆಚರಿಸಲು ಸಚಿವರು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News