ರಾಜ್ಯದಲ್ಲಿ ಕೊರೋನ ಸೋಂಕಿಗೆ ಮತ್ತೆ 84 ಬಲಿ; ಸಾವಿನ ಸಂಖ್ಯೆ 2,496ಕ್ಕೆ ಏರಿಕೆ

Update: 2020-08-02 17:13 GMT

ಬೆಂಗಳೂರು, ಆ. 2: ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಹೊಸದಾಗಿ 84 ಮಂದಿ ಮೃತಪಟ್ಟಿದ್ದಾರೆ. 5,532 ಮಂದಿಗೆ ಕೊರೋನ ಸೋಂಕು ತಗುಲಿದ್ದು, 4,077 ಮಂದಿ ಗುಣಮುಖರಾಗಿದ್ದಾರೆ.

ಈ ಮೂಲಕ ಸೋಂಕು ಪ್ರಕರಣಗಳು 1,34,819ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಈವರೆಗೆ 2,496 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 57,725 ಮಂದಿ ಗುಣಮುಖರಾಗಿದ್ದಾರೆ.

ತ್ರಿಶತಕ ಒಂದು ಜಿಲ್ಲೆ, ಮೂರು ಜಿಲ್ಲೆ ದ್ವಿಶತಕ, 10 ಜಿಲ್ಲೆ ಶತಕ: ಬಳ್ಳಾರಿ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಮಂದಿ ಸೋಂಕು, ಕಲಬುರ್ಗಿ, ಮೈಸೂರು, ರಾಯಚೂರು ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮಂದಿ ಸೋಂಕು, ಉಡುಪಿ, ಧಾರವಾಡ, ದಾವಣಗೆರೆ, ಬೆಳಗಾವಿ, ದಕ್ಷಿಣ ಕನ್ನಡ, ಹಾವೇರಿ, ಹಾಸನ, ಬೀದರ್, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ ಬೆಂಗಳೂರು ನಗರದಲ್ಲಿ 2,105 ಮಂದಿ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಸಾವು ಪ್ರಕರಣಗಳು: ರವಿವಾರ ಸೋಂಕಿನಿಂದಾಗಿ ಬೆಂಗಳೂರು ನಗರದಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು, ದಕ್ಷಿಣ ಕನ್ನಡ ತಲಾ 10, ಧಾರವಾಡ 8, ಕಲಬುರ್ಗಿ 6, ಶಿವಮೊಗ್ಗ 4, ಮಂಡ್ಯ, ಗದಗ ತಲಾ 4 ಮಂದಿ ಸಾವನ್ನಪ್ಪಿದ್ದಾರೆ.

ಗುಣಮುಖ: 4,077 ಮಂದಿಯಲ್ಲಿ ಬೆಂಗಳೂರಿನಲ್ಲಿ 2,331, ರಾಯಚೂರು 153, ತುಮಕೂರು 150, ಹಾಸನ 135, ಕಲಬುರ್ಗಿ 117, ಬಳ್ಳಾರಿ 105, ಮೈಸೂರು 101 ಮಂದಿ ಗುಣಮುಖರಾಗಿದ್ದಾರೆ. 

ಐಸಿಯುನಲ್ಲಿ ಇರುವವರು: ಬೆಂಗಳೂರು ನಗರ 339, ಧಾರವಾಡ 40, ಹಾಸನ 37, ಬಳ್ಳಾರಿ 22, ಕಲಬುರ್ಗಿ 21, ಮಂಡ್ಯ 19, ಕೊಪ್ಪಳ 18, ರಾಯಚೂರು 17, ಗದಗ 16, ಚಿತ್ರದುರ್ಗ, ಮೈಸೂರು ತಲಾ 12, ಬೀದರ್ 11, ದಾವಣಗೆರೆ, ತುಮಕೂರು ತಲಾ 10, ಬೆಳಗಾವಿ 9, ಹಾವೇರಿ, ಶಿವಮೊಗ್ಗ ತಲಾ 7, ದಕ್ಷಿಣ ಕನ್ನಡ 6, ಚಾಮರಾಜನಗರ, ಚಿಕ್ಕಬಳ್ಳಾಪುರ, ಉಡುಪಿ ತಲಾ 5, ಬಾಗಲಕೋಟೆ 4, ಚಿಕ್ಕಮಗಳೂರು, ಕೊಡಗು ತಲಾ 2, ಉತ್ತರ ಕನ್ನಡ, ವಿಜಯಪುರ ತಲಾ ಒಬ್ಬರು ತುರ್ತು ನಿಗಾ ಘಟಕದಲ್ಲಿ ಇದ್ದಾರೆ.

ಜಿಲ್ಲಾವಾರು ಸೋಂಕಿನ ವಿವರ: ರಾಜ್ಯದಲ್ಲಿ 5,532 ಮಂದಿ ಸೋಂಕಿತರಲ್ಲಿ ದಿನದ ಅತಿ ಹೆಚ್ಚು ಸೋಂಕಿತರು ಬೆಂಗಳೂರು ನಗರ 2,105, ಬಳ್ಳಾರಿ 377, ಕಲಬುರ್ಗಿ, ಮೈಸೂರು ತಲಾ 238, ರಾಯಚೂರು 212, ಉಡುಪಿ 182, ಧಾರವಾಡ 181, ದಾವಣಗೆರೆ 178, ಬೆಳಗಾವಿ 172, ದಕ್ಷಿಣ ಕನ್ನಡ 163, ಹಾವೇರಿ 146, ಹಾಸನ 142, ಬೀದರ್ 135, ಬಾಗಲಕೋಟೆ 131, ವಿಜಯಪುರ 113, ಶಿವಮೊಗ್ಗ 99, ಮಂಡ್ಯ 97, ಗದಗ 88, ಕೊಪ್ಪಳ 87, ರಾಮನಗರ 71, ಚಿಕ್ಕಬಳ್ಳಾಪುರ 55, ಕೋಲಾರ 51, ಚಿತ್ರದುರ್ಗ 46, ಚಿಕ್ಕಮಗಳೂರು 40, ಯಾದಗಿರಿ 39, ಬೆಂಗಳೂರು ಗ್ರಾಮಾಂತರ 38, ತುಮಕೂರು 35, ಚಾಮರಾಜನಗರ 31, ಉತ್ತರ ಕನ್ನಡ 26, ಕೊಡಗು ಜಿಲ್ಲೆಯಲ್ಲಿ 16 ಮಂದಿಗೆ ಕೊರೋನ ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News