ಕೊಪ್ಪಳ: ಹಾವು ಕಡಿತಕ್ಕೊಳಗಾದ ಸಹೋದರರಿಬ್ಬರು ಮೃತ್ಯು
Update: 2020-08-05 14:42 GMT
ಕೊಪ್ಪಳ: ಹಾವು ಕಡಿತಕ್ಕೊಳಗಾದ ಸಹೋದರರಿಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪೂರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಪ್ರಶಾಂತ್ ಹನುಮಪ್ಪ ಜಗಳೂರು (20), ಶಿವಕುಮಾರ ಹನುಮಪ್ಪ ಜಗಳೂರು (15) ಹಾವಿಗೆ ಬಲಿಯಾದ ಸಹೋದರರು
ಕುಟುಂಬಕ್ಕೆ ಆಸರೆಯಾಗಿದ್ದ ಯುವಕರಿಬ್ಬರು ಜಾನುವಾರುಗಳಿಗೆ ಮೇವು ತರಲು ತರಳಿದ್ದ ಸಂದರ್ಭ ವಿಷ ಸರ್ಪವೊಂದು ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದಾರೆ. ಹಾವು ಕಚ್ಚಿದ ಬಳಿಕ ಚಿಕಿತ್ಸೆಗೆ ಹನುಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುವ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.