ರಾಜ್ಯದಲ್ಲಿ ಕೊರೋನ ಸೋಂಕಿಗೆ ಮತ್ತೆ 100 ಮಂದಿ ಬಲಿ; ಸಾವಿನ ಸಂಖ್ಯೆ 2,804ಕ್ಕೆ ಏರಿಕೆ

Update: 2020-08-05 15:46 GMT

ಬೆಂಗಳೂರು, ಆ. 5: ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಮತ್ತೆ 100 ಮಂದಿ ಮೃತಪಟ್ಟಿದ್ದಾರೆ. 5,619 ಮಂದಿಗೆ ಕೊರೋನ ಸೋಂಕು ತಗುಲಿದ್ದು, 5,407 ಮಂದಿ ಗುಣಮುಖರಾಗಿದ್ದಾರೆ.

ಈ ಮೂಲಕ ಸೋಂಕು ಪ್ರಕರಣಗಳು 1,51,449ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಈವರೆಗೆ 2,804 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 74,679 ಮಂದಿ ಗುಣಮುಖರಾಗಿದ್ದಾರೆ.

ಸಾವು ಪ್ರಕರಣಗಳು: ಬುಧವಾರ ಸೋಂಕಿನಿಂದಾಗಿ ಬೆಂಗಳೂರು ನಗರದಲ್ಲಿ 29 ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು 11, ದಕ್ಷಿಣ ಕನ್ನಡ 10, ಬೆಳಗಾವಿ 4, ದಾವಣಗೆರೆ 6, ಧಾರವಾಡ 1, ಕಲಬುರ್ಗಿ 4, ಉಡುಪಿ 2, ಕೊಪ್ಪಳ 3, ಹಾಸನ 2, ಮಂಡ್ಯ 3, ರಾಯಚೂರು, ಯಾದಗಿರಿ, ಹಾವೇರಿ, ಬೀದರ್ ನಲ್ಲಿ ತಲಾ 2 ಮಂದಿ ಸಾವನ್ನಪ್ಪಿದ್ದಾರೆ.

ಐಸಿಯುನಲ್ಲಿ ಇರುವವರು: ಬೆಂಗಳೂರು ನಗರ 324, ಧಾರವಾಡ 39, ಹಾಸನ 39, ಕಲಬುರ್ಗಿ 27, ಬಳ್ಳಾರಿ 23, ಕೊಪ್ಪಳ 18, ಮಂಡ್ಯ 18, ರಾಯಚೂರು 17, ಗದಗ 15, ಚಿತ್ರದುರ್ಗ, ತುಮಕೂರು ತಲಾ 13, ಮೈಸೂರು 12, ಬೀದರ್ 11, ದಾವಣಗೆರೆ 10, ಬೆಳಗಾವಿ 9, ಶಿವಮೊಗ್ಗ 8, ಹಾವೇರಿ 7, ಚಾಮರಾಜನಗರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ತಲಾ 5 ಪ್ರಕರಣಗಳು ಪತ್ತೆಯಾಗಿವೆ. 

ಜಿಲ್ಲಾವಾರು ಸೋಂಕಿನ ವಿವರ: ರಾಜ್ಯದಲ್ಲಿ 5,619 ಮಂದಿ ಸೋಂಕಿತರಲ್ಲಿ ದಿನದ ಅತಿ ಹೆಚ್ಚು ಸೋಂಕಿತರು ಬೆಂಗಳೂರು ನಗರ 1848, ಬಳ್ಳಾರಿ 631, ಬೆಳಗಾವಿ 293, ಮೈಸೂರು 261, ದಾವಣಗೆರೆ 224, ಧಾರವಾಡ 199, ಕಲಬುರ್ಗಿ 197, ಉಡುಪಿ 173, ಕೊಪ್ಪಳ 154, ದಕ್ಷಿಣ ಕನ್ನಡ 149, ಬಾಗಲಕೋಟೆ 149, ಹಾಸನ 137, ಚಿಕ್ಕಬಳ್ಳಾಪುರ 129, ಉತ್ತರ ಕನ್ನಡ 125, ಮಂಡ್ಯ 123, ಬೆಂಗಳೂರು ಗ್ರಾಮಾಂತರ 110, ರಾಯಚೂರು 91, ಗದಗ 78, ಯಾದಗಿರಿ 76, ಹಾವೇರಿ 71, ವಿಜಯಪುರ 66, ಬೀದರ್ 52, ಕೋಲಾರ 49, ಚಿಕ್ಕಮಗಳೂರು 48, ರಾಮನಗರ 45, ಚಾಮರಾಜನಗರ 38, ಶಿವಮೊಗ್ಗ 35, ತುಮಕೂರು 31, ಚಿತ್ರದುರ್ಗ 24, ಕೊಡಗು ಜಿಲ್ಲೆಯಲ್ಲಿ 13 ಮಂದಿಗೆ ಕೊರೋನ ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News