ಕೋವಿಡ್19: ರಾಜ್ಯದಲ್ಲಿ ಮತ್ತೆ 6,805 ಮಂದಿಗೆ ಸೋಂಕು ದೃಢ; 93 ಮಂದಿ ಸಾವು

Update: 2020-08-06 16:12 GMT

ಬೆಂಗಳೂರು, ಆ.6: ರಾಜ್ಯದಲ್ಲಿ ಬುಧವಾರ ಸಂಜೆಯಿಂದ ಗುರುವಾರ ಸಂಜೆವರೆಗೆ ಮತ್ತೆ 6,805 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,58,254 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 93 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 2,897ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 15 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡ 11, ಧಾರವಾಡ, ದಾವಣಗೆರೆಯಲ್ಲಿ ತಲಾ 8, ಉಡುಪಿ 6,  ಕಲಬುರಗಿ, ತುಮಕೂರಿನಲ್ಲಿ ತಲಾ 5, ಬಳ್ಳಾರಿ, ಮೈಸೂರು, ಹಾಸನ, ಕೋಲಾರದಲ್ಲಿ ತಲಾ 4, ಬೀದರ್ ನಲ್ಲಿ 3 ಸಾವು ಸಂಭವಿಸಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2, 544, ಬಳ್ಳಾರಿ 431, ಮೈಸೂರು 361, ಶಿವಮೊಗ್ಗ 292, ಬೆಳಗಾವಿ 229, ಉಡುಪಿ 217, ಧಾರವಾಡ 212, ದಾವಣಗೆರೆ 197, ಕಲಬುರಗಿ 196, ರಾಯಚೂರು 181, ದಕ್ಷಿಣ ಕನ್ನಡ 173, ಬಾಗಲಕೋಟೆ 168, ತುಮಕೂರು 160, ಹಾಸನ 158, ಮಂಡ್ಯ 134, ಕೊಪ್ಪಳ 132, ಗದಗ 124, ಚಿಕ್ಕಬಳ್ಳಾಪುರ 117, ಕೋಲಾರ ಸೇರಿದಂತೆ 6,805 ಮಂದಿಗೆ ಸೋಂಕು ದೃಢಪಟ್ಟಿದೆ.

ಐಸಿಯುನಲ್ಲಿ ಇರುವವರು: ಬೆಂಗಳೂರು ನಗರ 324, ಹಾಸನ 43, ಧಾರವಾಡ 40, ದಾವಣಗೆರೆ 35, ಕಲಬುರ್ಗಿ 32, ಬಳ್ಳಾರಿ 23, ಕೊಪ್ಪಳ 18, ರಾಯಚೂರು 17, ದಕ್ಷಿಣ ಕನ್ನಡ, ಮಂಡ್ಯ ತಲಾ 16, ಗದಗ 15, ಮೈಸೂರು, ತುಮಕೂರು ತಲಾ 12, ಬೀದರ್ 11, ಬೆಳಗಾವಿ, ಚಿತ್ರದುರ್ಗ ತಲಾ 9, ಹಾವೇರಿ, ಶಿವಮೊಗ್ಗ ತಲಾ 7, ಚಾಮರಾಜನಗರ, ಚಿಕ್ಕಬಳ್ಳಾಪುರ, ಉಡುಪಿ ತಲಾ 5, ಬಾಗಲಕೋಟೆ 4, ಚಿಕ್ಕಮಗಳೂರು, ಕೊಡಗು ತಲಾ 2, ಉತ್ತರ ಕನ್ನಡ, ವಿಜಯಪುರ ಜಿಲ್ಲೆಯಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. 

ಒಟ್ಟಾರೆ ರಾಜ್ಯದಲ್ಲಿ 1,58,254 ಕೊರೋನ ಸೋಂಕಿತರ ಪೈಕಿ 80,281 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 5,602 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 2,897 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 75,068 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News