ಮಂಡ್ಯ: ಕೋವಿಡ್‍ನಿಂದ ಗುಣಮುಖರಾಗಿದ್ದ ಅಧಿಕಾರಿ ಹೃದಯಾಘಾತದಿಂದ ಸಾವು

Update: 2020-08-06 16:19 GMT

ಮಂಡ್ಯ, ಆ.6: ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದ ಸರಕಾರಿ ಅಧಿಕಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮದ್ದೂರು ತಾಲೂಕು ಆತಗೂರು ಗ್ರಾಮದ ಗುರುಸಿದ್ದಯ್ಯ(59) ಮೃತಪಟ್ಟವರು. ಇವರು ಮಂಡ್ಯದ ಸುಭಾಷ್‍ನಗರದಲ್ಲಿ ವಾಸವಾಗಿದ್ದರು.
ಬೆಂಗಳೂರಿನ ಖಾದಿ ಮತ್ತು ಗ್ರಾಮದ್ಯೊಗ ಮಂಡಳಿಯ ಅಧಿಕಾರಿಯಾದ ಗುರುಸಿದ್ದಯ್ಯ ಪ್ರತಿದಿನ ಮಂಡ್ಯದಿಂದ ಬೆಂಗಳೂರಿಗೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ.

ಕೊರೋನದಿಂದಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಇವರಿಗೆ ಬುಧವಾರ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News