ಎಂಟಿಬಿ ನಾಗರಾಜ್ ಆರೋಪಕ್ಕೆ ಶರತ್ ಬಚ್ಚೇಗೌಡ ಆಕ್ರೋಶ

Update: 2020-08-06 16:50 GMT

ಬೆಂಗಳೂರು, ಆ.6: ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಎಂಟಿಬಿ ನಾಗರಾಜ್ ಅವರಿಗೆ ಸಣ್ಣ ಪರಿಜ್ಞಾನ ಇರಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಚರ್ಚೆ, ಆರೋಪ ಮಾಡಲು ನ್ಯಾಯಾಂಗ ಇದೆ. 365 ದಿನವೂ ನ್ಯಾಯಾಂಗದ ಬಾಗಿಲು ತೆರೆದಿರುತ್ತದೆ. ಯಾವುದೇ ಅವ್ಯವಹಾರ ನಡೆದರೆ ನ್ಯಾಯಾಂಗದಲ್ಲಿ ಮಾತನಾಡಲಿ, 40 ವರ್ಷದ  ರಾಜಕಾರಣಿಗೆ ಈ ಒಂದು ಸಣ್ಣ ಪರಿಜ್ಞಾನ ಇರಬೇಕು ಎಂದು ತಿಳಿಸಿದರು.

ನಮ್ಮ ಜೀವನ ತೆರೆದ ಪುಸ್ತಕವಿದ್ದಂತೆ. ಅವರು ನಮಗಿಂತ ಹತ್ತಲ್ಲ, ದೇವರ ಆಶೀರ್ವಾದದಿಂದ ನೂರು ಪಟ್ಟು ಆಸ್ತಿ ಖರೀದಿಸಲಿ, ಆದರೆ ವಾಸ್ತವಾಂಶ ಏನೆಂದರೆ ಹೊಸಕೋಟೆ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿ ಅವರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನಮಗೆ ಜನರೇ ಆಸ್ತಿ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News