ಮುಹಮ್ಮದ್ ಯೂಸುಫ್ ನಿಧನಕ್ಕೆ ಎಸ್‍ಡಿಪಿಐ ಸಂತಾಪ

Update: 2020-08-07 12:24 GMT

ಬೆಂಗಳೂರು, ಆ.7: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಚೇರ್ಮನ್ ಆಗಿರುವ ಡಾಕ್ಟರ್ ಮೊಹಮ್ಮದ್ ಯೂಸುಫ್ ಸಾಹೇಬರ ನಿಧನದಿಂದ ರಾಜ್ಯವು ಹಿರಿಯ ಮುಸ್ಲಿಂ ನೇತಾರರೊಬ್ಬರನ್ನು ಕಳೆದುಕೊಂಡಿದೆ. 

ಅವರ ನಿಧನಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ಸಂತಾಪ ವ್ಯಕ್ತಪಡಿಸಿದೆ ಎಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ತಿಳಿಸಿದ್ದಾರೆ.

ಯೂಸುಫ್ ಸಾಹೇಬರು ಎಲ್ಲರ ಜೊತೆ ಸ್ನೇಹ ಹೊಂದುವವರಾಗಿದ್ದು, ತೆರೆದ ಮನಸ್ಸಿನಿಂದ ಮಾತುಕತೆ ನಡೆಸುವ ಸ್ವಭಾವವನ್ನು ಹೊಂದಿದ್ದರು ಎಂದು ಅಬ್ದುಲ್ ಹನ್ನಾನ್ ಹೇಳಿದ್ದಾರೆ.

ದಿವಂಗತರಿಗೆ ಸರ್ವಶಕ್ತನಾದ ಅಲ್ಲಾಹನು ಕ್ಷಮೆ ಹಾಗೂ ಸ್ವರ್ಗ ಪ್ರವೇಶವನ್ನು ಅನುಗ್ರಹಿಸಲಿ ಎಂದು ಎಸ್‍ಡಿಪಿಐ ಪ್ರಾರ್ಥಿಸುತ್ತದೆ ಎಂದು ಅಬ್ದುಲ್ ಹನ್ನಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News