ವ್ಯಾಪಾರದಲ್ಲಿ ನಷ್ಟ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Update: 2020-08-08 18:51 GMT

ಮೈಸೂರು, ಆ.8: ವ್ಯಾಪಾರದಲ್ಲಿ ನಷ್ಟವುಂಟಾದ ಕಾರಣ ಮನನೊಂದ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜೀವ ನಗರದಲ್ಲಿ ನಡೆದಿದೆ.

ಮೃತರನ್ನು ರಾಜೀವ ನಗರದ ಒಂದನೇ ಹಂತದ ನಿವಾಸಿ ಅಕ್ಬರ್ ಹುಸೇನ್(37)ಎಂದು ಗುರುತಿಸಲಾಗಿದೆ. ಕೊರೋನ ಸಂಕಷ್ಟದಿಂದ ವ್ಯಾಪಾರದಲ್ಲಿ ನಷ್ಟವುಂಟಾದ ಕಾರಣಕ್ಕೆ ಬೇಸರಗೊಂಡಿದ್ದರು. ಹೊಟ್ಟೆ ನೋವಿಗೆ ಔಷಧ ತರುವಂತೆ ಪತ್ನಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಬಳಿಕ ಮನೆಯಲ್ಲಿ ಒಬ್ಬರೇ ಇದ್ದಾಗ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News