ಬಿಜೆಪಿ ವಿರುದ್ಧ ಕ್ವಿಟ್ ಇಂಡಿಯಾ ಮಾದರಿಯಲ್ಲಿ ಹೋರಾಟ ನಡೆಸಬೇಕಿದೆ: ಈಶ್ವರ್ ಖಂಡ್ರೆ

Update: 2020-08-09 11:47 GMT

ಬೆಂಗಳೂರು, ಆ.9: ಕ್ವಿಟ್ ಇಂಡಿಯಾ ಹೋರಾಟದ ಮಾದರಿಯಲ್ಲಿ ಬಿಜೆಪಿ ಸರಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಇಡೀ ದೇಶದ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕ್ವಿಟ್‍ ಇಂಡಿಯಾದ 78ನೇ ಸ್ಮರಣೋತ್ಸವದ ಸಂದರ್ಭದಲ್ಲಿ ನಾವೆಲ್ಲಾ ಅನ್ಯಾಯ, ಅಸತ್ಯ, ದಬ್ಬಾಳಿಕೆ ಹಾಗೂ ಸರ್ವಾಧಿಕಾರಿ ಧೋರಣೆಯ ವಿರುದ್ಧ ಹೋರಾಡಲು ಮತ್ತೆ ಪಣತೊಡೋಣ. ಆ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಉಳಿಸೋಣವೆಂದು ತಿಳಿಸಿದ್ದಾರೆ.

ಕ್ವಿಟ್‍ ಇಂಡಿಯಾ ಕೇವಲ ಒಂದು ಆಂದೋಲನವಲ್ಲ. ಈ ನೆಲದ ಕ್ರಾಂತಿ. 70 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ದಾಸ್ಯ, ಅನ್ಯಾಯ, ದಬ್ಬಾಳಿಕೆಯ ವಿರುದ್ಧ ಇಡೀ ದೇಶವೇ ಸೆಟೆದು ನಿಂತಿತ್ತು. ಮಾಡು ಇಲ್ಲವೇ ಮಡಿ ವೇದ ಘೋಷ ಈ ನೆಲದ ಎಲ್ಲಡೆ ರಣರಣಿಸಿತ್ತು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News