ಎಸೆಸೆಲ್ಸಿಯಲ್ಲಿ ಮಂಡ್ಯ ಜಿಲ್ಲೆಗೆ ರಾಜ್ಯದಲ್ಲಿ 4ನೇ ಸ್ಥಾನ; ಧೀರಜ್ ರೆಡ್ಡಿ ರಾಜ್ಯಕ್ಕೆ ಪ್ರಥಮ

Update: 2020-08-10 15:11 GMT
ಧೀರಜ್ ರೆಡ್ಡಿ

ಮಂಡ್ಯ, ಆ.10: ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ 4ನೇ ಸ್ಥಾನ ಬಂದಿದ್ದು, ಜಿಲ್ಲೆಯ ವಿದ್ಯಾರ್ಥಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.

ಮಂಡ್ಯ ತಾಲೂಕು ದುದ್ದ ಬಳಿ ಮಾರದೇವನಹಳ್ಳಿಯಲ್ಲಿರುವ ಸತ್ಯಸಾಯಿ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಧೀರಜ್ ರೆಡ್ಡಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

ಧೀರಜ್ ರೆಡ್ಡಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ್ದು, ಈತ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿ ಗ್ರಾಮದವರು. 

ಮುಖ್ಯೋಪಾಧ್ಯಾಯ ಪ್ರಭಾಕರ್ ರೆಡ್ಡಿ, ಮುಖ್ಯೋಪಾಧ್ಯಾಯಿನಿ ಮಂಜುಳ ಅವರ ದ್ವಿತೀಯ ಪುತ್ರ ಧೀರಜ್, ಪ್ರಾಥಮಿಕ ಶಿಕ್ಷಣವನ್ನು ಕ್ಯಾಸಂಬಳ್ಳಿ ಗ್ರಾಮಿಣ ವಿದ್ಯಾ ಸಂಸ್ಥೆಯಲ್ಲಿ ಪಡೆದು ಎಸೆಸೆಲ್ಸಿಯನ್ನು ಮಂಡ್ಯದ ಶ್ರೀ ಸತ್ಯ ಸಾಯಿ ಶಾರದಾ ನೀಕತನ ಶಾಲೆಯಲ್ಲಿ ಓದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News