ರಾಜ್ಯದಲ್ಲಿ ಕೋವಿಡ್ ಗೆ ಮತ್ತೆ 114 ಮಂದಿ ಬಲಿ; ಸಾವಿನ ಸಂಖ್ಯೆ 3312ಕ್ಕೆ ಏರಿಕೆ

Update: 2020-08-10 16:16 GMT

ಬೆಂಗಳೂರು, ಆ.10: ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆವರೆಗೆ ಮತ್ತೆ 4,267 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,82,354 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 114 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 3312ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 36 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ದಾವಣಗೆರೆ 11, ದಕ್ಷಿಣ ಕನ್ನಡ 8, ಬಳ್ಳಾರಿ 7, ಉಡುಪಿ 6, ಕೊಪ್ಪಳ 6, ಹಾಸನ 6,  ತುಮಕೂರು 5, ಮೈಸೂರು 5, ಧಾರವಾಡ 4, ಬೆಳಗಾವಿ 3, ಶಿವಮೊಗ್ಗ 3, ಹಾವೇರಿ 3, ಮಂಡ್ಯ 2, ರಾಮನಗರ 2, ಗದಗ 2, ಚಿಕ್ಕಬಳ್ಳಾಪುರ, ಬೀದರ್, ಚಾಮರಾಜನಗರ, ಕಲಬುರಗಿ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1,243, ಮೈಸೂರು 374, ಬಳ್ಳಾರಿ 253, ದಾವಣಗೆರೆ 225, ಕಲಬುರಗಿ 196, ರಾಯಚೂರು 165, ಧಾರವಾಡ 157, ಬಾಗಲಕೋಟೆ 147, ದಕ್ಷಿಣ ಕನ್ನಡ 146, ವಿಜಯಪುರ 139, ಹಾಸನ 126, ಕೊಪ್ಪಳ 110, ಕೋಲಾರ 100, ತುಮಕೂರು 98, ಉಡುಪಿ 90, ರಾಮನಗರ 84, ಚಾಮರಾಜನಗರ 70, ಯಾದಗಿರಿ 68, ಮಂಡ್ಯ 66, ಬೆಳಗಾವಿ 54, ಉತ್ತರ ಕನ್ನಡ 53, ಬೆಂಗಳೂರು ಗ್ರಾಮಾಂತರ 50, ಹಾವೇರಿ 45, ಚಿಕ್ಕಮಗಳೂರು 45, ಗದಗ 42, ಚಿತ್ರದುರ್ಗ 38, ಕೊಡಗು 29, ಬೀದರ್ 28, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 26 ಪ್ರಕರಣ ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 1,82,354 ಕೊರೋನ ಸೋಂಕಿತರ ಪೈಕಿ 99,126 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 5218 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 3,312 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 79,908 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News