ಕೋವಿಡ್ ಸೋಂಕಿತರ ಕೈಕಾಲಿಗೆ ಬೇಡಿ ಹಾಕಿ ಚಿಕಿತ್ಸೆ ನೀಡುತ್ತಿರುವುದು ಅಮಾನವೀಯ: ಈಶ್ವರ್ ಖಂಡ್ರೆ

Update: 2020-08-11 16:19 GMT

ಬೆಂಗಳೂರು, ಆ.11: ಕೊರೋನ ಸೋಂಕಿತ ರೋಗಿಗಳ ಕೈ ಹಾಗೂ ಕಾಲುಗಳಿಗೆ ಬೇಡಿ ಹಾಕಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ಕ್ರಮ ಅಮಾನವೀಯವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಆಸ್ಪತ್ರೆಗಳ ಐಸಿಯುನಲ್ಲಿ ಕೊರೋನ ಸೋಂಕಿತರ ಕೈ ಕಾಲಿಗೆ ಬೇಡಿ ಹಾಕಿ ಚಿಕಿತ್ಸೆ ನೀಡುತ್ತಿರುವುದು ಅಮಾನವೀಯ ಕ್ರಮವಾಗಿದೆ. ಶಾಸಕರೊಬ್ಬರ ತಂದೆಗೆ ಈ ರೀತಿ ಚಿಕಿತ್ಸೆ ನೀಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಐಸಿಯುಗಳಲ್ಲಿ ರೋಗಿಗಳನ್ನು ಮುಟ್ಟಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಈ ಪ್ರಕರಣಗಳು ಇಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಚರ್ಚೆಗೆ ಬಂದಿದೆ. ರೋಗಿಗಳ ಕೈ ಕಾಲಿಗೆ ಬೇಡಿ ಹಾಕುವುದನ್ನು ಆಸ್ಪತ್ರೆಗಳು ನಿಲ್ಲಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಲ್ಲಿ ಮನವಿ ಮಾಡಿದ್ದೇನೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News