ರಾಜ್ಯದಲ್ಲಿ ಮತ್ತೆ 7,908 ಹೊಸ ಕೊರೋನ ಪ್ರಕರಣ ದೃಢ, 104 ಮಂದಿ ಸಾವು

Update: 2020-08-14 17:00 GMT

ಬೆಂಗಳೂರು, ಆ.14: ರಾಜ್ಯದಲ್ಲಿ ಶುಕ್ರವಾರ 7,908 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 104 ಜನರು ಸೋಂಕಿಗೆ ಬಲಿಯಾಗಿದ್ದು, 6,940 ಜನರು ಗುಣಮುಖರಾಗಿದ್ದಾರೆ. 

ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 2,11,108ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖರಾದವರ ಸಂಖ್ಯೆ 1,28,182ಕ್ಕೆ ತಲುಪಿದೆ. 747 ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 3,717ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 8 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 79,201ಕ್ಕೆ ಏರಿಕೆಯಾಗಿದ್ದು, ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

104 ಸೋಂಕಿತರು ಬಲಿ: ಬೆಂಗಳೂರು ನಗರದಲ್ಲಿ 22, ಮೈಸೂರು 9, ಶಿವಮೊಗ್ಗ 3, ದಾವಣಗೆರೆ, ಉಡುಪಿ ತಲಾ 7, ದಕ್ಷಿಣ ಕನ್ನಡ 6, ಮೈಸೂರು 10, ಕಲಬುರ್ಗಿ 5, ಧಾರವಾಡ 8, ಗದಗ 1, ತುಮಕೂರು 2, ಮಂಡ್ಯ 1, ಕೊಪ್ಪಳ 5, ಹಾಸನ, ವಿಜಯಪುರ, ಹಾವೇರಿ ತಲಾ 5, ಚಿಕ್ಕಮಗಳೂರು, ಬೀದರ್, ಉತ್ತರ ಕನ್ನಡ ತಲಾ 1, ರಾಮನಗರ 2, ಚಾಮರಾಜನಗರ 2, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ.

ತಿಂಗಳಾಂತ್ಯಕ್ಕೆ 3 ಲಕ್ಷ ಗಡಿ ದಾಟುವ ಸಾಧ್ಯತೆ: ಜುಲೈಗಿಂತ ಆಗಸ್ಟ್ ನಲ್ಲಿ ಸೋಂಕು ತೀವ್ರವಾಗುತ್ತದೆ ಎಂದು ಆರೋಗ್ಯ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದರು. ಈ ತಿಂಗಳಾಂತ್ಯಕ್ಕೆ 3 ಲಕ್ಷ ಗಡಿದಾಟುತ್ತವೆ ಎಂದು ಅಂದಾಜಿಸಿದ್ದಾರೆ. ತಜ್ಞರು ಹೇಳಿದಂತೆ ಸದ್ಯ 18 ದಿನಗಳಲ್ಲಿಯೇ ಒಂದು ಲಕ್ಷ ಮಂದಿ ಸೋಂಕಿತರಾಗಿದ್ದು, ಮುಂದಿನ 16 ದಿನಗಳಲ್ಲಿ ಅಂದರೆ ಆಗಸ್ಟ್ ಮುಕ್ತಾಯಕ್ಕೆ ಮತ್ತೊಂದು ಲಕ್ಷ ಸೋಂಕು ಪ್ರಕರಣಗಳು ಕಾಣಿಸಿಕೊಂಡು ಒಟ್ಟಾರೆ ಪ್ರಕರಣಗಳು ಮೂರು ಲಕ್ಷ ದಾಟುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 7,908 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬೆಂಗಳೂರು ನಗರ 2,452, ಬಳ್ಳಾರಿ 608, ಶಿವಮೊಗ್ಗ 413, ದಾವಣಗೆರೆ 351, ಬೆಳಗಾವಿ 334, ಉಡುಪಿ 322, ದಕ್ಷಿಣ ಕನ್ನಡ 307, ಮೈಸೂರು 291, ಕಲಬುರ್ಗಿ 229, ರಾಯಚೂರು 220, ಧಾರವಾಡ 219, ಗದಗ 190, ತುಮಕೂರು 185, ಬಾಗಲಕೋಟೆ 171, ಮಂಡ್ಯ 163, ಕೊಪ್ಪಳ 162, ಹಾಸನ 158, ವಿಜಯಪುರ 144, ಹಾವೇರಿ 138, ಯಾದಗಿರಿ 116, ಚಿಕ್ಕಮಗಳೂರು 104, ಬೀದರ್ 97, ಉತ್ತರ ಕನ್ನಡ, ರಾಮನಗರ ತಲಾ 87, ಕೋಲಾರ 81, ಚಿತ್ರದುರ್ಗ 77, ಚಾಮರಾಜನಗರ 61, ಕೊಡಗು 60, ಚಿಕ್ಕಬಳ್ಳಾಪುರ 42, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 39 ಪ್ರಕರಣಗಳು ಪತ್ತೆಯಾಗಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News