ಚಿಕ್ಕಮಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್‌ನಿಂದ ಸ್ವಾತಂತ್ರ್ಯೋತ್ಸವ ಆಚರಣೆ

Update: 2020-08-15 09:00 GMT

ಚಿಕ್ಕಮಗಳೂರು, ಆ.15: ಕರ್ನಾಟಕ ಮುಸ್ಲಿಂ ಜಮಾಅತ್‌ನ ಚಿಕ್ಕಮಗಳೂರು ಜಿಲ್ಲಾ ಸಮಿತಿಯ ಕಚೇರಿ ಜಾಮಿಯಾ ಕಂಜುಲಿ ಈಮಾನ್‌ನಲ್ಲಿ 74ನೇ  ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. 

ಸಮಿತಿಯ ಜಿಲ್ಲಾಧ್ಯಕ್ಷ ಹಾಜಿ ಮುಹಮ್ಮದ್ ಶಾಹಿದ್ ರಝ್ವಿ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಜೆಇಎಸ್ ಶಾಲೆಯ ಪ್ರಾಂಶುಪಾಲ ನಂದಕುಮಾರ್ ಮುಖ್ಯ ಭಾಷಣ ಮಾಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಮುಖಂಡ ಸಿದ್ದೀಕ್ ಮುಂತೊಳಿ, ಮೌಲಾನ ಮುಹಮ್ಮದ್ ಯೂಸುಫ್, ಮೌಲಾನಾ ಫೇಸಿ ಉರ್ರಹ್ಮಾನ್, ಮೌಲಾನಾ ಝುಲ್ಫಿಕರ್, ಹಫೀಝ್ ಇರ್ಶಾದ್ ರಝಾ ಮಾತನಾಡಿದರು.

ಎ.ಯೂಸುಫ್ ಹಾಜಿ, ಆರಿಫ್ ಅಲಿ ಖಾನ್, ಅಖ್ತರ್ ಹುಸೈನ್, ಜಂಶೀದ್ ಖಾನ್‌ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಝ್ ಅಹ್ಮದ್ ರಝ್ವಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News