ಬೇಟೆಗೆ ತೆರಳಿದ ವ್ಯಕ್ತಿ ಜೊತೆಯಲ್ಲಿದ್ದವನ ಗುಂಡೇಟಿಗೆ ಬಲಿ
Update: 2020-08-15 09:39 GMT
ಮಡಿಕೇರಿ, ಆ.15: ಬೇಟೆಗೆಂದು ತೆರಳಿದ್ದ ವ್ಯಕ್ತಿಯೊಬ್ಬ ಜೊತೆಯಲ್ಲಿದ್ದವನ ಗುಂಡೇಟಿಗೆ ಬಲಿಯಾದ ಘಟನೆ ಮಕ್ಕಂದೂರು ಗ್ರಾಮದ ಉದಯಗಿರಿ ಎಂಬಲ್ಲಿ ನಡೆದಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಮಡಿಕೇರಿ ತಾಲೂಕು ಲಾರಿ ಮಾಲಕರ ಸಂಘದ ಅಧ್ಯಕ್ಷ ಶಿವ ಬೋಪಣ್ಣ (37) ಗುಂಡೇಟಿನಿಂದ ಮೃತಪಟ್ಟವರು. ಜೊತೆಯಲ್ಲಿದ್ದ ಶರಣ್ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಮೂವರು ಶುಕ್ರವಾರ ರಾತ್ರಿ ಬೇಟೆಗೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ಗುಂಡೇಟಿನಿಂದ ಶಿವ ಬೋಪಣ್ಣ ಮೃತಪಟ್ಟಿದ್ದರೆನ್ನಲಾಗಿದೆ. ಆರೋಪಿ ಮಡಿಕೇರಿ ನಿವಾಸಿ ದೇವಯ್ಯ ಪೊಲೀಸರಿಗೆ ಶರಣಾಗಿದ್ದಾನೆ.
ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.