ಶಿವಮೊಗ್ಗ: ನೀರಿನಲ್ಲಿ ಕೊಚ್ಚಿಹೋಗಿದ್ದ ಯುವಕನ ಮೃತದೇಹ ಪತ್ತೆ
Update: 2020-08-15 16:17 GMT
ಶಿವಮೊಗ್ಗ, ಆ.15: ಶುಕ್ರವಾರ ಸಂಜೆ ತುಂಗಾ ಚಾನಲ್ನಲ್ಲಿ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ ಯುವಕನ ಮೃತದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯೆ ಆರತಿ ಪ್ರಕಾಶ್ ಹಾಗೂ ಅ.ಮ.ಪ್ರಕಾಶ್ ಅವರ ಪುತ್ರನಾಗಿರುವ ಪ್ರತೀಶ್ (24) ಮೃತ ಯುವಕ.
ಶಿವಮೊಗ್ಗ ರಾಮಿನಕೊಪ್ಪ ಸಮೀಪದ ಹಾಯ್ ಹೊಳೆ ತುಂಗಾ ಎಡದಂಡೆ ನಾಲೆ ಬಳಿ ಈ ಘಟನೆ ನಡೆದಿದೆ. ಜನ್ಮ ದಿನದ ಸಂಭ್ರಮದಲ್ಲಿದ್ದ ಪ್ರತೀಶ್ ಶುಕ್ರವಾರ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದರು.
ರಾತ್ರಿಯಿಂದ ಸ್ಥಳದಲ್ಲಿದ್ದ ತುಂಗಾ ನಗರ ಪಿಎಸ್ಐ ತಿರುಮಲೇಶ್ ಹಾಗೂ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಶೋಧ ಕಾರ್ಯಾಚರಣೆಗೆ ನೆರವಾಗಿದ್ದರು. ಈ ಸಂದರ್ಭದಲ್ಲಿ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಪ್ರಮುಖರಾದ ಡಿ.ಎಸ್. ಅರುಣ್, ಚನ್ನಬಸಪ್ಪ (ಚೆನ್ನಿ) ಐಡಿಯಲ್ ಗೋಪಿ, ಅ.ನಾ. ವಿಜಯೇಂದ್ರರಾವ್ ಸೇರಿದಂತೆ ಹಲವರಿದ್ದರು.