ಎಸ್ಡಿಪಿಐ ಸೋಮೇಶ್ವರ ವಲಯ, ಕೋಟೆಕಾರ್ ಪಟ್ಟಣ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2020-08-15 16:47 GMT

ಕೋಟೆಕಾರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸೋಮೇಶ್ವರ ವಲಯ ಸಮಿತಿ ಮತ್ತು ಕೋಟೆಕಾರ್ ಪಟ್ಟಣ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನವನ್ನು ಉಚ್ಚಿಲ ಗುಡ್ಡೆ ಜಂಕ್ಷನ್ ನಲ್ಲಿ ಆಚರಿಸಲಾಯಿತು.

ಸ್ಥಳೀಯ ಗಣ್ಯ ವ್ಯಕ್ತಿ ಎಮ್.ಎಚ್ ಪೋಕರ್ ಕುಂಞಿ ಧ್ವಜಾರೋಹಣ ನೆರವೇರಿಸಿದರು. ಎಸ್ಡಿಪಿಐ ಸೋಮೇಶ್ವರ ವಲಯ ಸಮಿತಿ ಅಧ್ಯಕ್ಷ ಮೊಯಿದಿನ್ ಕುಟ್ಟಿ ಮತ್ತು ಎಸ್ಡಿಪಿಐ ಅಜ್ಜಿನಡ್ಕ ಕೋಶಾಧಿಕಾರಿ ಇಬ್ರಾಹಿಂ ಉಚ್ಚಿಲ ಗುಡ್ಡೆ ಅವರು ಭಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಜುಲೇಖಾ ಬಶೀರ್, ಎಸ್ಡಿಟಿಯು ಮಂಗಳೂರು ಕ್ಷೇತ್ರ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ, ಬಿ.ಎಸ್.ಟಿ ಬಾವ, ನಾಸಿರ್ ಖಾನ್, ಹಕೀಮ್ ಕೆ.ಸಿ ರೋಡ್ ಉಪಸ್ಥಿತರಿದ್ದರು.

ಸಂಶುದ್ದೀನ್ ಅಜ್ಜಿನಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿರು. ನಜೀರ್ ಉಚ್ಚಿಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News