ರಾಜ್ಯದಲ್ಲಿ ಒಂದೇ ದಿನ 8,642 ಹೊಸ ಕೊರೋನ ಪ್ರಕರಣ ದೃಢ, 126 ಮಂದಿ ಸಾವು
ಬೆಂಗಳೂರು, ಆ.19: ರಾಜ್ಯದಲ್ಲಿ ಬುಧವಾರ 8,642 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 126 ಜನರು ಸೋಂಕಿಗೆ ಬಲಿಯಾಗಿದ್ದು, 7,201 ಜನರು ಗುಣಮುಖರಾಗಿದ್ದಾರೆ.
ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 2,49,590ಕ್ಕೆ ತಲುಪಿದೆ. 704 ಸೋಂಕಿತರು ಐಸಿಯುನಲ್ಲಿದ್ದಾರೆ.
ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 4,327ಕ್ಕೆ ತಲುಪಿದ್ದು, ಬುಧವಾರ ಅನ್ಯ ಕಾರಣದಿಂದ 16 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 81,097ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
126 ಸೋಂಕಿತರು ಬಲಿ: ಬಳ್ಳಾರಿ 9, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 56, ಬೀದರ್ 3, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 4, ದಾವಣಗೆರೆ 7, ಧಾರವಾಡ 9, ಗದಗ 2, ಹಾವೇರಿ, ಕಲಬುರ್ಗಿ ತಲಾ 3, ಕೊಪ್ಪಳ 8, ಮೈಸೂರು 5, ರಾಯಚೂರು, ಶಿವಮೊಗ್ಗ ತಲಾ 2, ತುಮಕೂರು 5, ಉತ್ತರ ಕನ್ನಡ 1, ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 8,642 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 163, ಬಳ್ಳಾರಿ 537, ಬೆಳಗಾವಿ 379, ಬೆಂಗಳೂರು ಗ್ರಾಮಾಂತರ 68, ಬೆಂಗಳೂರು ನಗರ 2,804, ಬೀದರ್ 43, ಚಾಮರಾಜನಗರ 111, ಚಿಕ್ಕಬಳ್ಳಾಪುರ 73, ಚಿಕ್ಕಮಗಳೂರು 100, ಚಿತ್ರದುರ್ಗ 47, ದಕ್ಷಿಣ ಕನ್ನಡ 234, ದಾವಣಗೆರೆ 228, ಧಾರವಾಡ 253, ಗದಗ 149, ಹಾಸನ 228, ಹಾವೇರಿ 137, ಕಲಬುರ್ಗಿ 154, ಕೊಡಗು 38, ಕೋಲಾರ 86, ಕೊಪ್ಪಳ 133, ಮಂಡ್ಯ 185, ಮೈಸೂರು 562, ರಾಯಚೂರು 153, ರಾಮನಗರ 126, ಶಿವಮೊಗ್ಗ 915, ತುಮಕೂರು 94, ಉಡುಪಿ 375, ಉತ್ತರ ಕನ್ನಡ 119, ವಿಜಯಪುರ 107, ಯಾದಗಿರಿ ಜಿಲ್ಲೆಯಲ್ಲಿ 41 ಪ್ರಕರಣಗಳು ಪತ್ತೆಯಾಗಿವೆ.