ರಾಜ್ಯದಲ್ಲಿ ಒಂದೇ ದಿನ 7,571 ಹೊಸ ಕೊರೋನ ಪ್ರಕರಣ ದೃಢ; 93 ಮಂದಿ ಸಾವು

Update: 2020-08-21 15:05 GMT

ಬೆಂಗಳೂರು, ಆ.21: ರಾಜ್ಯದಲ್ಲಿ ಶುಕ್ರವಾರ 7,571 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 93 ಜನರು ಸೋಂಕಿಗೆ ಬಲಿಯಾಗಿದ್ದು, 6,561 ಜನರು ಗುಣಮುಖರಾಗಿದ್ದಾರೆ.

ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 2,64,546ಕ್ಕೆ ತಲುಪಿದೆ. 698 ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 4,522ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 16 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 83,066ಕ್ಕೆ ಏರಿಕೆಯಾಗಿದ್ದು, ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

93 ಸೋಂಕಿತರು ಬಲಿ: ಬಳ್ಳಾರಿ 9, ಬೆಳಗಾವಿ 7, ಬೆಂಗಳೂರು ನಗರ 22, ಬೀದರ್ 4, ಚಿಕ್ಕಮಗಳೂರು 2, ದಕ್ಷಿಣ ಕನ್ನಡ 5, ದಾವಣಗೆರೆ 7, ಧಾರವಾಡ 3, ಗದಗ 1, ಹಾಸನ 2, ಹಾವೇರಿ 4, ಕಲಬುರ್ಗಿ 7, ಕೊಡಗು, ಕೋಲಾರ ತಲಾ 2, ಕೊಪ್ಪಳ 5, ಮಂಡ್ಯ 1, ರಾಯಚೂರು, ತುಮಕೂರು ತಲಾ 3, ವಿಜಯಪುರ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.  

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 7,571 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 115, ಬಳ್ಳಾರಿ 540, ಬೆಳಗಾವಿ 384, ಬೆಂಗಳೂರು ಗ್ರಾಮಾಂತರ 79, ಬೆಂಗಳೂರು ನಗರ 2,948, ಬೀದರ್ 73, ಚಾಮರಾಜನಗರ 59, ಚಿಕ್ಕಬಳ್ಳಾಪುರ 61, ಚಿಕ್ಕಮಗಳೂರು 102, ಚಿತ್ರದುರ್ಗ 98, ದಕ್ಷಿಣ ಕನ್ನಡ 202, ದಾವಣಗೆರೆ 237, ಧಾರವಾಡ 252, ಗದಗ 174, ಹಾಸನ 144, ಹಾವೇರಿ 224, ಕಲಬುರ್ಗಿ 145, ಕೊಡಗು 65, ಕೋಲಾರ 50, ಕೊಪ್ಪಳ 234, ಮಂಡ್ಯ 99, ರಾಯಚೂರು 100, ರಾಮನಗರ 75, ಶಿವಮೊಗ್ಗ 227, ತುಮಕೂರು 136, ಉಡುಪಿ 278, ಉತ್ತರ ಕನ್ನಡ 91, ವಿಜಯಪುರ 124, ಯಾದಗಿರಿ ಜಿಲ್ಲೆಯಲ್ಲಿ 255 ಪ್ರಕರಣಗಳು ಪತ್ತೆಯಾಗಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News