ದಾವಣಗೆರೆ: ಪಾಕಿಸ್ತಾನ ಪರ ಸಂದೇಶ ಹಂಚಿಕೆ ಆರೋಪ; ಕಾನ್‍ಸ್ಟೇಬಲ್ ಅಮಾನತು

Update: 2020-08-23 12:43 GMT

ದಾವಣಗೆರೆ, ಆ.23: ಪಾಕಿಸ್ತಾನ ಪರ ಸಂದೇಶವಿತ್ತು ಎನ್ನಲಾದ ಫೇಸ್‍ಬುಕ್ ಪೇಜ್‍ ಅನ್ನು ವಾಟ್ಸ್ ಆ್ಯಪ್‍ ಗ್ರೂಪ್‍ಗೆ ಹಂಚಿಕೆ ಮಾಡಿದ್ದ ಆರೋಪದಡಿಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ವಾಹನ ಚಾಲಕ ಸನಾವುಲ್ಲಾ ಅವರನ್ನು ಸೇವೆಯಿಂದ ಅಮಾನುತಗೊಳಿಸಲಾಗಿದೆ.

ಸನಾವುಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‍ಸ್ಟೇಬಲ್ ಆಗಿ 2008 ರಲ್ಲಿ ಆಯ್ಕೆಯಾಗಿದ್ದರು. ಇವರನ್ನು  2014ರಲ್ಲಿ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಪಾಕಿಸ್ತಾನ ಪರ ಸಂದೇಶ ಹಂಚಿಕೆ ಮಾಡಿದ ಸಂಬಂಧ ಸಶಸ್ತ್ರ ಮೀಸಲುಪಡೆಯ ಕಾನ್‍ಸ್ಟೇಬಲ್ ಅವರನ್ನು ಇಂದಿನಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನುತಗೊಳಿಸಲಾಗಿದೆ. ಈ ಬಗ್ಗೆ ತನಿಖೆ ಕೈಗೊಂಡಿದ್ದು ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News