ಪ್ರವಾಹದಿಂದ ಬೆಳೆ ನಷ್ಟ: ಆತ್ಮಹತ್ಯೆಗೆ ಶರಣಾದ ರೈತ
Update: 2020-08-24 20:29 IST
ಬಾಗಲಕೋಟೆ, ಆ.24: ಬೆಳೆದು ನಿಂತ ಗೋವಿನಜೋಳ ಮಲಪ್ರಭಾ ನದಿ ನೆರೆ ಪ್ರವಾಹಕ್ಕೆ ಸಿಲುಕಿ ಬೆಳೆ ನಷ್ಟವಾದ ಹಿನ್ನೆಲೆ ಮನನೊಂದು ಬಾದಾಮಿ ತಾಲೂಕಿನ ತಳಕವಾಡದ ರೈತರೊಬ್ಬರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೇಗುಂಡಪ್ಪ(68) ಮೃತ ರೈತ. ಇವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೇಗುಂಡಪ್ಪ ಅವರು ನಾಲ್ಕು ಎಕರೆಯಲ್ಲಿ ಬೆಳೆದ ಗೋವಿನಜೋಳ ನೆರೆಗೆ ಸಿಲುಕಿ ಹಾನಿಗೀಡಾಗಿದೆ. 2.50 ಲಕ್ಷ ಸಾಲ ಮಾಡಿಕೊಂಡಿದ್ದ ಅವರು ಬೆಳೆ ನಷ್ಟವಾಗಿದ್ದರಿಂದ ಸಾಲ ತೀರಿಸೋದು ಹೇಗೆಂದು ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಈ ಸಂಬಂಧ ಬದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.