ಸಿಂದಗಿ: ಯುವಕನ ಕೊಲೆ ಪ್ರಕರಣ: ಇಬ್ಬರ ವಿರುದ್ಧ ದೂರು

Update: 2020-08-28 07:23 GMT

ಸಿಂದಗಿ: ಬೂದಿಹಾಳ ಪಿಎಚ್ ಗ್ರಾಮದ ಅಗಸಿಯಲ್ಲಿರುವ ಹೊಟೇಲೊಂದರಲ್ಲಿ ಇದ್ದ ಯುವಕನನ್ನು ದುಷ್ಕರ್ಮಿಗಳು ಕಣ್ಣಿಗೆ ಕಾರದ ಪುಡಿ ಎರಚಿ ಚಾಕುವಿನಿಂದ ಇರಿದು ಕೊಲೆಗೈದಿದ್ದು, ಘಟನೆಯನ್ನು ಖಂಡಿಸಿ ಗ್ರಾಮದ ಯುವಕರು ಪ್ರತಿಭಟನೆ ನಡೆಸಿದ್ದಾರೆ.

ಮೃತ ಯುವಕನನ್ನು ಗ್ರಾಮದ ಅನೀಲ ಶರಣಪ್ಪ ಇಂಗಳಗಿ (24) ಎಂದು ಗುರುತಿಸಲಾಗಿದ್ದು. ಘಟನೆಯು ಹಣದ ವ್ಯವಹಾರ ಹಾಗೂ ಹಳೇ ವೈಷಮ್ಯ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಎಚ್.ಎಂ.ಪಟೇಲ, ಪಿಎಸೈ ಸಂಗಮೇಶ ಹೊಸಮನಿ ದೌಡಾಯಿಸಿ ಪ್ರಕರಣದ ಕುರಿತು ತನಿಖೆ  ಚೂರುಕುಗೊಳಿಸಿದ್ದಾರೆ.

ಕೊಲೆಯಾದ ಯುವಕನ ತಂದೆ ಶರಣಪ್ಪ ಸಾಯಬಣ್ಣ ಇಂಗಳಗಿ ಅದೇ ಗ್ರಾಮದ ಸಿದ್ದು ಸುಭಾಷ ಬಿರಾದಾರ ಮತ್ತು ಮಣ್ಣೂರ ಗ್ರಾಮದ ಸಂತೋಷ ಸುರೇಶ ಹಿರ್ಲಾಕುಂಡ ಎಂಬವರ ವಿರುದ್ಧ ಸಿಂದಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನನ್ವಯ ಪ್ರಕರಣದ ತನಿಖೆ ತೀವೃಗತಿಯಲ್ಲಿ ನಡೆಯುತ್ತಿದೆ.

-ಸಂಗಮೇಶ ಹೊಸಮನಿ, ಪಿಎಸ್‍ಐ, ಸಿಂದಗಿ ಪೋಲಿಸ್ ಠಾಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News