×
Ad

ಪುತ್ರಿಯ ಅಂತರ್ಜಾತಿ ವಿವಾಹದಿಂದ ಮನನೊಂದು ಪೋಷಕರು ಆತ್ಮಹತ್ಯೆ

Update: 2020-08-28 21:25 IST

ಬೆಂಗಳೂರು, ಆ.28: ಪುತ್ರಿ ಅಂತರ್ಜಾತಿ ವಿವಾಹವಾದ ಹಿನ್ನೆಲೆ ಮನನೊಂದ ಪೋಷಕರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಇಲ್ಲಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶರಣುಶಿವಲಿಂಗಪ್ಪ(51), ಚಂದ್ರಕಲಾ(45) ಆತ್ಮಹತ್ಯೆ ಮಾಡಿಕೊಂಡಿರುವ ಪೋಷಕರು ಎಂದು ತಿಳಿದುಬಂದಿದೆ.

ದಂಪತಿಯ ಪುತ್ರಿ ಸೌಮ್ಯಾ ಎಂಬಾಕೆ ಬೇರೆ ಸಮುದಾಯದ ಯುವಕನೊಂದಿಗೆ ಗುರುವಾರ ಮದುವೆಯಾಗಿದ್ದಾಳೆ. ಇದರಿಂದ ಮನನೊಂದ ದಂಪತಿ ಮನೆಯ ಸಂಪ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆಗೂ ಮುನ್ನ ಪೋಷಕರು, ಡೆತ್ ನೋಟ್ ಬರೆದಿದ್ದು, ನಮ್ಮ ಸಾವಿಗೆ ನಾವೇ ಜವಾಬ್ದಾರರು ಎಂದು ಉಲ್ಲೇಖಿಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News