ಕೊರೋನ ಸೋಂಕಿನ ನಡುವೆ ರಾಜ್ಯದಲ್ಲಿ 13,885 ಸಾವಿರ ಪ್ರಕರಣಗಳು ಇತ್ಯರ್ಥ
ಬೆಂಗಳೂರು, ಆ.31: ಕೊರೋನ ಸೋಂಕಿನ ನಡುವೆ ರಾಜ್ಯದಲ್ಲಿ 13,885 ಸಾವಿರ ಕೇಸ್ಗಳ ಇತ್ಯರ್ಥವನ್ನು ನ್ಯಾಯಾಂಗ ಮಾಡಿದೆ. ಈ ತಿಂಗಳ ಆ.1ರಿಂದ 28ರವರೆಗೆ 13,885 ಪ್ರಕರಣಗಳು ಇತ್ಯರ್ಥ ಆಗಿವೆ.
ರಾಜ್ಯಾದ್ಯಂತ ಕೊರೋನ ಹೆಚ್ಚಾಗುತ್ತಿರುವ ಸಂದರ್ಭದಲ್ಲೂ ರಾಜ್ಯದ ನ್ಯಾಯಾಲಯಗಳು ನಿರಂತರವಾಗಿ ಕಾರ್ಯ ನಿರ್ವಹಿಸಿವೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಬಾದಾಮಿಕರ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಅರ್ಜಿಗಳ ಕಲಾಪ ನಡೆದಿವೆ. ಆ.1ರಿಂದ 28ರವರೆಗೆ ಒಟ್ಟು 13,885 ಪ್ರಕರಣಗಳನ್ನು ಇತ್ಯರ್ಥಪಡಿಸಿವೆ. ಹೈಕೋರ್ಟ್ ರೂಪಿಸಿರುವ ಎಸ್ಓಪಿ ಮಾರ್ಗಸೂಚಿಗಳ ಅಡಿ ಕಾರ್ಯ ನಿರ್ವಹಿಸಲಾಗಿದೆ. ಕೊರೋನ ಭೀತಿಯ ನಡುವೆ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ 36,197 ಪ್ರಕರಣಗಳು ದಾಖಲಾಗಿವೆ.
ಫಿಸಿಕಲ್ ಫೈಲಿಂಗ್ ಮೂಲಕ 33,495 ಪ್ರಕರಣಗಳು ದಾಖಲಾಗಿದ್ದವು. ಇ-ಫೈಲಿಂಗ್ ಮೂಲಕ 2,702 ಪ್ರಕರಣಗಳು ದಾಖಲಾಗಿದ್ದವು ಎಂದು ಮಾಹಿತಿ ನೀಡಿದ್ದಾರೆ.
ಅವುಗಳಲ್ಲಿ ಫಿಸಿಕಲ್ ಮತ್ತು ಇ-ಫೈಲಿಂಗ್ ಮೂಲಕ 18,645 ಪ್ರಕರಣಗಳನ್ನು ನ್ಯಾಯಾಲಯಗಳ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗಿತ್ತು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ತಿಳಿಸಿದ್ದಾರೆ.