ಕೋವಿಡ್19: ನಾವು ಅಮೆರಿಕ ಮಣಿಸುವ ದಿನ ದೂರವಿಲ್ಲ; ದಿನೇಶ್ ಗುಂಡೂರಾವ್

Update: 2020-09-06 16:11 GMT

ಬೆಂಗಳೂರು, ಸೆ. 6: ಕೊರೋನ ಪ್ರಕರಣ ಹೆಚ್ಚಳದಲ್ಲಿ ಭಾರತ ಇನ್ನು ಕೇವಲ ಅಮೆರಿಕಾ ಮಣಿಸುವುದು ಮಾತ್ರ ಬಾಕಿ ಇದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾವು ಇನ್ನು ಅಮೆರಿಕಾವನ್ನು ಮಾತ್ರ ಮೀರಿ ಮುಂದೆ ಹೋದರೆ ಸಾಕು. ನನ್ನ ಪ್ರಕಾರ ಇದು ಕೂಡ ಸಾಧ್ಯವಾಗುತ್ತದೆ ಎಂಬ ಖಾತ್ರಿಯಿದೆ. ಆರ್ಥಿಕ ದುಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಟ್ಟ ಸ್ಥಿತಿ ಎದುರಾಗಲಿದೆ. ಸಿಗುತ್ತಿರುವ ಸೂಚನೆಗಳು, ಕಾಣುತ್ತಿರುವ ಚಿತ್ರಣ ಕೂಡ ಇದನ್ನು ಸ್ಪಷ್ಟಪಡಿಸುತ್ತಿವೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಮುಂದಿನ ದಿನಗಳಲ್ಲಿ ನಗದು ರಹಿತವಾಗಿಸುವುದಾಗಿ ಭರವಸೆ ಕೊಟ್ಟಿದ್ದರು. ಇದಕ್ಕೆ ಪೂರಕವೆಂಬಂತೆ ಅವರು ಎಲ್ಲರ ಜೇಬು ಖಾಲಿ ಮಾಡಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಜಿಎಸ್‍ಟಿ ಯುಪಿಎ ಸರಕಾರದ ಕನಸಿನ ಕೂಸು. ಆದರೆ, ಮೋದಿ ಸರಕಾರ ಮೂಲ ಜಿಎಸ್‍ಟಿ ಕಾಯ್ದೆಯನ್ನೇ ಬದಲಾಯಿಸಿ ದೇಶದಲ್ಲಿ ಆರ್ಥಿಕ ಭಯೋತ್ಪಾದನೆ ಮಾಡುತ್ತಿದೆ. ಬಡ, ಮಧ್ಯಮ ಹಾಗೂ ದುಡಿಯುವ ವರ್ಗದ ದುಡಿಮೆಯ ಹಣವನ್ನು ವಸೂಲಿ ಮಾಡಲು ಮೋದಿ ಸರಕಾರ ಜಿಎಸ್‍ಟಿಯನ್ನು ಅಸ್ತ್ರದಂತೆ ಬಳಸುತ್ತಿರುವುದು ದೇಶದ ಜನರ ದುರಾದೃಷ್ಟವಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News