ಎಲ್ಲ ರಂಗದಲ್ಲಿ ಮುಂಚೂಣಿ ಸಾಧನೆ ಮಾಡುವ ಪ್ರಯತ್ನ: ಮುಖ್ಯಮಂತ್ರಿ ಯಡಿಯೂರಪ್ಪ
Update: 2020-09-12 16:54 GMT
ಬೆಂಗಳೂರು, ಸೆ. 12: `ನವ ಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ರಾಜ್ಯವು ಎಲ್ಲ ರಂಗಗಳಲ್ಲಿ ಮುಂಚೂಣಿ ಸಾಧನೆ ಮಾಡುವ ಪ್ರಾಮಾಣಿಕ ಪ್ರಯತ್ನಗಳು ಸವಾಲುಗಳ ನಡುವೆಯೂ ಮುಂದುವರಿಯಲಿದೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ಟ್ವೀಟ್ ಮಾಡಿರುವ ಅವರು, ಸಾರ್ಟ್ ಅಪ್ ಉದ್ಯಮಗಳಿಗೆ ಬಲಿಷ್ಟ ಉತ್ತೇಜಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿರುವ ರಾಜ್ಯಗಳ ನವೋದ್ಯಮ ಶ್ರೇಯಾಂಕ-2019' ಪಟ್ಟಿಯಲ್ಲಿ ಕರ್ನಾಟಕ ಸಾಧನೆ ಅತ್ಯುತ್ತಮವಾಗಿದೆ' ಎಂದು ಹೇಳಿದ್ದಾರೆ.